This is the title of the web page
This is the title of the web page
Crime News

ಪುಟ್ಟ ಬಾಲಕನ ಬಲಿ ಪಡೆದ ವೈದ್ಯನ ಚಿಕಿತ್ಸೆ : ಈ ಸಾವು ನ್ಯಾಯವೇ


K2 ಕ್ರೈಂ ನ್ಯೂಸ್ : ಇತ್ತೀಚೆಗೆ ವೈದ್ಯರ ನಿರ್ಲಕ್ಷದ ಚಿಕಿತ್ಸೆಯಿಂದ ರೋಗಿಗಳು ಪ್ರಾಣ ಕಳೆದುಕೊಳ್ಳುವ ಪ್ರಸಂಗಗಳು ಪದೇ ಪದೇ ಜರುಗುತ್ತದೆ ಅಂತಹದ್ದೇ ಒಂದು ಘಟನೆ ಇದೀಗ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮೃತ ದುರ್ದೈವಿ ಪ್ರೀತಂ ನಾಯಕ(11) ಕಳೆದ 4 ದಿನಗಳ ಹಿಂದೆ ಅನಾರೋಗ್ಯದ ಸಮಸ್ಯೆ ಆಗಿ, ಕೋನಣನಕುಂಟೆಯಲ್ಲಿನ ರಾಜ ನಂದಿನಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ವೇಳೆ ಪ್ರೀತಮ್‌ನನ್ನು ಪರೀಕ್ಷಿಸಿದ ವೈದ್ಯರು ಇಂಜೆಕ್ಷನ್‌ ಕೊಟ್ಟಿದ್ದಾರೆ.

ಮನೆಗೆ ವಾಪಸ್ ಬಂದಿದ್ದ ಪ್ರೀತಮ್‌ಗೆ ಮರುದಿನವೇ ಇಂಜೆಕ್ಷನ್‌ ಕೊಟ್ಟ ಜಾಗ ಹಾಗೂ ಕಾಲು ಊತ ಬಂದಿದೆ. ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ಬಳಿಕ ಪರೀಕ್ಷೆ ಮಾಡಿದಾಗ ಇಂಜೆಕ್ಷನ್‌ನಿಂದ ಕಾಲು ಇನ್ಫೆಕ್ಷನ್‌ ಆಗಿದೆ. ಹೀಗಾಗಿ ಕೂಡಲೇ ಆಪರೇಷನ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಪ್ರೀತಮ್‌ಗೆ ಆಪರೇಷನ್‌ ಮಾಡಿದ್ದು, ಆತ ಚಿಕಿತ್ಸೆಗೆ ಸ್ಪಂದಿಸದೇ ಪ್ರಾಣ ಬಿಟ್ಟಿದ್ದಾನೆ. ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ದೂರಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


[ays_poll id=3]