ಸಿಂಧನೂರು : ಅ.3ರಂದು ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸಿ, ಬಂದಿತರಿಂದ 22 ತೊಲೆ ಚಿನ್ನಾಭರಣ ಜಪ್ತಿ ಮಾಡಿದ ಗ್ರಾಮೀಣ ಠಾಣೆ ಪೊಲೀಸರು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಸ್ಕಿ ತಾಲೂಕಿನ ಬೇಡರಕಾರಲಕುಂಟಿ ಗ್ರಾಮದ ಸೋಮಣ್ಣ (20), ಪಗಡದಿನ್ನಿ ಪೈ ಕ್ಯಾಂಪಿನ ಬಸವರಾಜ ಅಂಥೋನಿ (31) ಬಂಧಿತರು. ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪಿನ ವಿ.ವಾಸು ಎನ್ನುವವರ ಮನೆಯ ಹಿಂಬಾಗಿಲನ್ನು ಜೋರಾಗಿ ತಳ್ಳಿ ಒಳಗಿ ನುಗ್ಗಿ ಬಿರೋದಲ್ಲಿದ್ದ ಚಿನ್ನಾಭರಣ, ನಗದು ದೋಚಿದ್ದಾರೆ ಎಂದು ಪಿ.ವಾಸು ದೂರು ಸಲ್ಲಿಸಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು 22 ತೊಲೆ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ.
ಅ.3ರಂದು ಮನೆಗೆ ನುಗ್ಗಿದ ಕಳ್ಳರು, 2 ಲಕ್ಷ ರೂ.ಮೌಲ್ಯದ 60 ಗ್ರಾಂ.ತೂಕದ 4 ಬಂಗಾರದ ಬಳೆ, 1.80 ಲಕ್ಷ ರೂ.ಬೆಲೆ ಬಾಳುವ ಬಂಗಾರದ ನೆಕ್ಲೇಸ್, 75 ಸಾವಿರ ರೂ.ಮೌಲ್ಯದ 20 ಗ್ರಾಂ ಬ್ರಾಸ್ಲೆಟ್, 90 ಸಾವಿರ ರೂ.ಮೌಲ್ಯದ 30 ಗ್ರಾಂ.ಕರಿಮಣಿ ಸರ, 12 ಗ್ರಾಂ.ತೂಕದ 40 ಸಾವಿರ ರೂ.ಬೆಲೆ ಬಾಳುವ ಬಂಗಾರದ ಸರ, 95 ಸಾವಿರ ರೂ.ಮೌಲ್ಯದ 30 ಗ್ರಾಂ.ಬಂಗಾರದ ಓಲೆ, 40 ಸಾವಿರ ರೂ.ಮೌಲ್ಯದ 3 ಬಂಗಾರದ ಉಂಗುರ, ನಗದು ಹಣ 35 ಸಾವಿರ ರೂ.ಸೇರಿದಂತೆ ಒಟ್ಟು 7 ಲಕ್ಷ 55 ಸಾವಿರ ರೂ.ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
[ays_poll id=3]