K2kannadanews.in
ರಾಯಚೂರು : ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ಕೆಲಸ ಕಾರ್ಯಗಳು ಜನರಿಗೆ ತಲುಪುತ್ತಿಲ್ಲ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವರ ಅಸಮಧಾನ ವ್ಯಕ್ತಪಡಿಸಿದರು.
ರಾಯಚೂರು ನಗರದ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಸಚಿವರು, ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಭ ಆಗ್ತಿದೆ, ಶೋಷಣೆ ಆಗ್ತಿದೆ, ಜನರ ನೆಮ್ಮದಿ ಕಳಿಯುವಂಥ ಕೆಲಸ ಆಗ್ತಿದೆ. ಜಿಲ್ಲೆಯಲ್ಲಿ 30ರಷ್ಟು ಜನ ಅವರ ಕಸುಬು ಬಿಟ್ಟು ಕಂದಾಯ ಕಛೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಂದಗತಿಯ ಕರಲಸದಿಂದ ಜನ ಜಟಿಲ ಸಮಸ್ಯಗೆ ಸಿಲುಕಿಕೊಂಡಿದ್ದಾರೆ.
ಹಾಗಾಗಿ ಸರಕಾರದ ಸಚಿವರು, ಶಾಸಕರು ಎಲ್ಲೇ ಹೋದ್ರು ಕೆಲಸ ಆಗಿಲ್ಲ ಅಂತ ದೂರು ಕೊಡ್ತಾರೆ. ಅಧಿಕಾರಿಗಳು ಇದಕ್ಕೆ ಆಸ್ಪದ ಕೊಡದೆ ಜನರಿಗೆ ಸೇವೆ ಸರಿಯಾಗಿ ಕೊಡೆ ಎಂದರು.
[ays_poll id=3]