This is the title of the web page
This is the title of the web page
State News

ಎಲ್ಲ ಗ್ಯಾರೆಂಟಿ ಮಹಿಳೆಯರಿಗೆ ; ಪುರುಷರಿಗೆ ಯಾಕೆ ಇಲ್ಲ – ವಾಟಾಳ್​


K2kannadanews.in

News Desk : ಉದ್ಯೋಗಕ್ಕಾಗಿ (Employment) ಮತ್ತು ಹಿಂದಿ ಹೇರಿಕೆ ವಿರೋಧಿಸಿ ಮೈಸೂರಿನ(Mysore) ಜಯಚಾಮರಾಜೇಂದ್ರ ವೃತ್ತದಲ್ಲಿ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿ ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಪದವೀಧರರಿಗೆ (Degree) ಮೂರು ಸಾವಿರ, ಡಿಪ್ಲೋಮ (Diploma) ಪದವೀಧರರಿಗೆ ಒಂದೂವರೆ ಸಾವಿರ ಭಿಕ್ಷೆಯ ರೂಪದಲ್ಲಿ ನೀಡುತ್ತಿದ್ದೀರಾ.? ಪದವೀಧರರಿಗೆ ನಿಮ್ಮ ದುಡ್ಡು(money) ಬೇಡ, ಬದಲಾಗಿ ಉದ್ಯೋಗ (job) ನೀಡಿ. ವರ್ಷಕ್ಕೆ ಎಷ್ಟು ಜನ ಪದವೀಧರರಾಗುತ್ತಿದ್ದಾರೆ ಎಂಬ ಮಾಹಿತಿ ಇದೆಯೇ ? ಪದವೀಧರರ ಸಮಸ್ಯೆ ಆಲಿಸಲು ಓರ್ವ ಸಚಿವರನ್ನ ನೇಮಕ ಮಾಡಿ ಎಂದ‌ ಅವರು. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್​ ನೀಡಿರುವ ಸ್ತ್ರೀ ಶಕ್ತಿ, ಗೃಹಲಕ್ಷ್ಮೀ ಎಲ್ಲ ಗ್ಯಾರೆಂಟಿಗಳು (Guaranty) ಮಹಿಳೆಯರಿಗೆಯೇ ಇವೆ. ಆದರೆ, ಪುರುಷರಿಗೆ ಯಾಕೆ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಪ್ರಶ್ನಿಸಿದ್ದಾರೆ.​


[ays_poll id=3]