K2kannadanews.in
Election News ರಾಯಚೂರು : ಸರ್ಕಾರಿ ಕೆಲಸ (Government work) ಮಾಡಬೇಕಾದ ಶಿಕ್ಷಣ ಇಲಾಖೆ ಸಿ ಆರ್ ಪಿ (CRP) ಒಬ್ಬರು, ರಾಜಕೀಯ (Position house) ವ್ಯಕ್ತಿಗಳ ಮನೆಯಲ್ಲಿ ಊಪಹಾರ ಬಡಿಸುವ ಕೆಲಸ (Serve backfast) ಮಾಡಿರುವ, ವೀಡಿಯೋ ಪೋಟೊಗಳು ವೈರಲ್ (Viral video) ಆಗಿದ್ದರ ಬಗ್ಗೆ ನಿಮ್ಮ K2ಕನ್ನಡನ್ಯೂಸ್ ನಲ್ಲಿ ಸುದ್ದಿ ಮಾಡಲಾಗಿತ್ತು. ಇದೀಗ ಘಟನೆ ಬಗ್ಗೆ ತನಿಖೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿಗಳು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಹೌದು ಸರಕಾರಿ ಕೆಲಸ ಬಿಟ್ಟು ರಾಜಕೀಯ ವ್ಯಕ್ತಿಗಳ ಹಿಂದೆ ಸುತ್ತುತ್ತಿರುವ, ಶಿಕ್ಷಣ ಇಲಾಖೆ (Education deportment), ರಾಯಚೂರು (Raichur) ತಾಲೂಕಿನ ಉಡುಮಗಲ್ ಖಾನಾಪುರ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕ (Udumagal school teacher) ಆಗಿರುವ ಕೆ.ರಾಮು, ಬೆಂಗಳೂರಿನ (Benglore) ಕೆ.ಪಿ ನಂಜುಂಡಿ ಮನೆಯಲ್ಲಿ ಪ್ರತ್ಯಕ್ಷವಾಗಿದ್ದರು.
ಸಕೆ.ರಾಮು ಅವರು, ಕೆ.ಪಿ ನಂಜುಂಡಿ (K P Nanjundi) ಮನೆಗೆ ಉಪಹಾರಕ್ಕಾಗಿ ಆಗಮಿಸಿದ್ದ, ಡಿ ಕೆ ಶಿವಕುಮಾರ್ (D K Shivakumar) ಅವರಿಗೆ ಮತ್ತು ಅಲ್ಲಿ ಕುಳಿತ ಎಲ್ಲರಿಗೂ ಉಪಹಾರ ಬಡಿಸುವ ಕೆಲಸ ಮಾಡಿದ್ದಾರೆ. ಚುನಾವಣೆ ನೀತಿ ಸಂಹಿತೆ (Code of conduct) ಜಾರಿ ಇರುವ ಹಿನ್ನೆಲೆ ಸರ್ಕಾರಿ ನೌಕರ ಗಾಳಿಗೆ ತೂರಿ ರಾಜಕೀಯ ವ್ಯಕ್ತಿಗಳ ಹಿಂದೆ ಓಡಾಟ ನಡೆಸಿದ್ದು ಸರಿಯೇ ಎಂದು ಪ್ರಶ್ನೆ ಮಾಡಿ ಸುದ್ದಿ ಮಾಡಿತ್ತು. ಸುದ್ದಿ ಬಿತ್ತರವಾದ ನಂತರ ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ನೀಡಿ ತನಿಖೆ ಆರಂಭಿಸಿದ್ದರು ಇದೀಗ ತನ್ನಿಕೆಯಿಂದ ಸತ್ಯತೆ ಬಯಲಾಗಿ ಜಿಲ್ಲಾ ಚುನಾವಣೆ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಯಾಗಿರುವ ಎಲ್ಲ ಚಂದ್ರಶೇಖರ್ ನಾಯಕ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
[ays_poll id=3]