K2kannadanews.in
ರಾಯಚೂರು : ತೆಲಾಂಗಾಣದಿಂದ (telangana) ರಾಯಚೂರಿಗೆ ಅಕ್ರಮವಾಗಿ (illegal) ಸಿಹೆಚ್ ಪೌಡರ್(CH Powder) ಸಾಗಿಸುತ್ತಿದ್ದ ವೇಳೆ, ಅಬಕಾರಿ(Excise) ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 30ಕೆಜಿ ಸಿಹೆಚ್ ಪೌಡರ್ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು(accused) ವಶಕ್ಕೆಪಡೆದ ಘಟನೆ ಜರುಗಿದೆ.
ರಾಯಚೂರು ತಾಲ್ಲೂಕಿನ ಗ್ರಾಮಾಂತರ ಭಾಗದಲ್ಲಿ ಇಂದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಕ್ತಿನಗರ(shakthi nagara) ಚೆಕ್ ಪೋಸ್ಟ್(check post) ಬಳಿ ದ್ವಿಚಕ್ರ(bike) ವಾಹನಗಳನ್ನು ತಪಾಸಣೆ ಮಾಡಿದ ವೇಳೆ, ಸಿಹೆಚ್ ಪೌಡರ್ ಸಾಗಿಸುತ್ತಿರುವ ವಿಚಾರ ಬಯಲಿಗೆ ಬಂದಿದೆ. ಮಕ್ತಲ್(makhtal) ತಾಲ್ಲೂಕಿನ ಅಶೋಕ ಮತ್ತು ಕರ್ನಿ ನಿಂಗನಗೌಡ ಎಂಬ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಆರೋಪಿಗಳಿಂದ 30ಕೆಜಿ ಸಿ.ಹೆಚ್ ಪೌಡರ್ ಮತ್ತು ಎರಡು ಬೈಕ್ ಜಪ್ತಿ ಮಾಡಿದ್ದಾರೆ.
[ays_poll id=3]