ದೇವದುರ್ಗ : ಕೃಷ್ಣಾ ನದಿಯಿಂದ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿಯಾದ ಘಟನೆ ಹೊನ್ನಟಗಿ ಗ್ರಾಮದ ಬಳಿ ಜರುಗಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೊನ್ನಟಗಿ ಗ್ರಾಮದ ಬಳಿ, ಕಾಲುವೆ ಮೇಲೆ ಟಿಪ್ಪರ್ ಲಾರಿಯು, ಕೃಷ್ಣಾ ನದಿಯಿಂದ ಮರಳು ಸಾಗಿಸುತ್ತಿದ್ದ ವೇಳೆ ಅವಘಡ ಜರುಗಿದ್ದು, ಕೆಎ 04 ಎ.ಡಿ 3065 ನಂಬರ್ ನ ಟಿಪ್ಪರ್ ಪಲ್ಟಿಯಾಗಿದೆ. ಘಟನೆಗೆ ಚಾಲಕ ಅತಿಯಾದ ವೇಗವಾಗಿ ಹೋಗಿದ್ದು ಮತ್ತು ಓವರ್ ಲೋಡ್ ಮರಳು ಇದ್ದದ್ದೆ ಕಾರಣ ಎನ್ನಲಾಗುತ್ತಿದೆ.
ಘಟನೆಯಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಗಬ್ಬೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗೆ ಚಿಕಿತ್ಸೆ ಕಳುಹಿಸಲಾಗಿದೆ. ಇನ್ನೂ ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
[ays_poll id=3]