ರಾಯಚೂರು : ತಿಂಡಿ(brackfast) ಕೊಡಲು ಲೇಟ್ ಮಾಡಿದಕ್ಕೆ ಗ್ರಾಹಕನೋರ್ವ (customer) ಹೋಟೆಲ್ ಮಾಲೀಕನ(owner) ಮುಖಕ್ಕೆ ಎಣ್ಣೆ ಎರಚಿ ವಿಕೃತಿ ಮೆರೆದಿರುವ ಘಟನೆ ರಾಜೊಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು(Raichur) ಜಿಲ್ಲೆ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಭೀಮಾ ನಾಯಕ್(Bhimanayak) ಎಂಬಾತ ಹೋಟೆಲ್ನಲ್ಲಿ ತಿಂಡಿ ತಿನ್ನಲು ಬಂದಿದ್ದು ಒಗ್ಗರಣೆ ಆರ್ಡರ್ ಮಾಡಿದ್ದ. ಈ ವೇಳೆ ಒಗ್ಗರಣೆ ಕೊಡುವಲ್ಲಿ ತಡವಾಗಿದಕ್ಕೆ ಉಪ್ಪಿಟ್ಟು ಮಾಡಲು ಇಟ್ಟಿದ್ದ ಬಿಸಿ ಎಣ್ಣೆಯನ್ನು ಹೋಟೆಲ್ ಮಾಲೀಕನಿಗೆ ಎರಚಿ ವಿಕೃತಿ ಮೆರೆದಿದ್ದಾನೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ರಂಗಯ್ಯ ಶೆಟ್ಟಿ(Rangayya shatty) ಮುಖಕ್ಕೆ ಸುಟ್ಟ ಗಾಯಗಳಾಗಿದ್ದು ಮಾನ್ವಿ ಸರಕಾರಿ ಆಸ್ಪತ್ರೆಗೆ ಗಾಯಾಳು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
[ays_poll id=3]