ರಾಯಚೂರು : ಶಾರ್ಟ್ ಸರ್ಕಿಟ್ ನಿಂದ ಗುಡಿಸಲಿಗೆ ಬೆಂಕಿ ಹತ್ತಿಕೊಂಡು ಮನೆಯ ಸಮೇತ ಗುಡಿಸಲಿನಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಕುರ್ವಕುದ ಗ್ರಾಮದಲ್ಲಿ ನಡೆದಿದೆ.
ರಾಯಚೂರು ತಾಲೂಕಿನ ಚಂದ್ರಬಂಡ ಬಳಿ ಇರುವ ಕುರ್ವಕುದ ಗ್ರಾಮದಲ್ಲಿ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಗುಡಿಸಲು ಸುಟ್ಟು ಹೋಗಿದ್ದು. ಗುಡಿಸಲಿನಲ್ಲಿದ್ದ, 62000 ಸಾವಿರ ರೂಪಾಯಿ ಬೆಲೆ ಬಾಳುವ ಸಾಮಗ್ರಿಗಳ ಜೊತೆ 20ತೊಲೆ ಬೆಳ್ಳಿ ಮತ್ತು ಅರ್ಧ ತೊಲೆ ಬಂಗಾರ ಸುಟ್ಟು ಕರಕಲಾಗಿದೆ.
ಗ್ರಾಮದ ನರಸಿಂಹಲು ಎಂಬುವರಿಗೆ ಸೇರಿದ ಗುಡಿಸಲು. ನರಸಿಂಹಲು ಮತ್ತು ಮಕ್ಕಳು ಕುರಿ ಕಾಯಲು ಹೋಗಿದ್ದರು. ಪತ್ನಿ ಲಕ್ಷ್ಮಿ ಕೂಲಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಗುಡಿಸಲು ಸುಟ್ಟು ಕರಕಲಾಗಿದೆ.
[ays_poll id=3]