This is the title of the web page
This is the title of the web page
State News

ಹೇಳೋದೊಂದು ಮಾಡೋದು ಮತ್ತೊಂದು – ಮಾಜಿ DCM ಆರೋಪ


K2 ಪೊಲಿಟಿಕಲ್ ನ್ಯೂಸ್ : ರಾಜ್ಯದಲ್ಲಿ ನೂತನವಾಗಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಏನು ಹೇಳುತ್ತಾರೋ ನಂತರ ಅದರ ವಿರುದ್ಧವಾಗಿಯೇ ಮಾಡುತ್ತಾರೆ ಅಂತ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಕಾಂಗ್ರೆಸ್ ಸರ್ಕಾರದ ಭರವಸೆ ನೀಡಿದ ಗ್ಯಾರಂಟಿಗಳು ಜಾರಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಆರ್. ಅಶೋಕ್, ಕಳ್ಳರಿಗೆ ಕಳ್ಳ, ಅಲ್ದೇ ಕದಿಯೋದು ಇನ್ನೊಬ್ರಿಗೆ ಕೊಡೋದು ಕಾಂಗ್ರೆಸ್ ಕೆಲಸ. ಎಲ್ಲೆಲ್ಲಿ ಬೆಲೆ ಏರಿಕೆ ಮಾಡಬಹುದೋ ಅಲ್ಲಲ್ಲಿ ಏರಿಕೆ ಮಾಡ್ತಾರೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಮೋಸಗಾರ ಪಕ್ಷ. ಉಚಿತ ವಿದ್ಯುತ್ ಎಂದು ಈಗ ಸರಾಸರಿ ಬಳಕೆಯಷ್ಟೇ ಫ್ರೀ ಅಂತಿದ್ದಾರೆ. ದೇಶದ ಮಟ್ಟದಲ್ಲಿ ರಾಜ್ಯ ಯಾವ ಮಟ್ಟಕ್ಕೆ ಹೋಗುತ್ತೆ ನೋಡಿ ಎಂದು ಗುಡುಗಿದರು.


[ays_poll id=3]