ರಾಯಚೂರು : ಸಿದ್ದಗಂಗಾ ಮಠದ ತ್ರಿವಿಧಿ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿಗಳ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಜನವರಿ 21ರಂದು ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ದಾಸೋಹ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ದಾರಿದೀಪ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಹೇಳಿದರು.
ದಾರಿದೀಪ ಸಂಸ್ಥೆಯ ಸದಸ್ಯೆ ಗೀತಾ ಅವರು ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಶಿಕ್ಷಣದ ಹಸಿವು ಇರುವಂತಹ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನ ಒದಗಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಅನಾಥಾಶ್ರಮದಲ್ಲಿ ಇರುವಂತಹ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡುತ್ತಿದೆ. ಕೊರೋನ ಸಂದರ್ಭದಲ್ಲಿ ಹಸುನೀಗಿದಂತಹ ಅನಾಥಾಶ್ರಮದ ಇಬ್ಬರು ಸದಸ್ಯರಿಗೆ ದಾರಿದೀಪ ಸಂಸ್ಥೆ ವತಿಯಿಂದ ಶವ ಸಂಸ್ಕಾರ ಮಾಡಿದ್ದು, ಬೀದಿ ಬದಿಯಲ್ಲಿ ಇರುವಂತಹ ಬಡವರಿಗೆ ಭಿಕ್ಷುಕರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡುತ್ತಿದೆ ಎಂದು ಹೇಳಿದರು.
[ays_poll id=3]