ರಾಯಚೂರಿನ ಮುದಗಲ್ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ..ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಗೊಂದಲ ಕುರಿತು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಹೇಳಿಕೆ ವಿಚಾರ.. ಮೋದಿಯವರು ಯಾವ ದೃಷ್ಟಿಯಿಟ್ಟು ಹೇಳಿದ್ದಾರೆ ಗೊತ್ತಿಲ್ಲ ಅವರನ್ನೇ ಕೇಳಬೇಕು.. ನಮ್ಮ ಸರ್ಕಾರ ಕೇರಳದಲ್ಲಿ ಇರುತ್ತೆ , ಕರ್ನಾಟಕದಲ್ಲೂ ಇರುತ್ತೆ, ಬೇರೆ ಕಡೆನೂ ಇದ್ದೇ ಇರುತ್ತದೆ.. ಐದು ವರ್ಷದ ವರೆಗೆ ಇದ್ದೇ ಇರುತ್ತೆ ಅದು ಪ್ರಶ್ನೆ ಅಲ್ಲಾ.. ಅವರು ಹೇಳುವ ಅರ್ಥ ಅವರಿಗೆ ಗೊತ್ತು ಅವರೇ ಹೇಳಬೇಕು.. ಸಿಎಂ ಕುರ್ಚಿ ಗೊಂದಲ ನಮ್ಮ ಪಾರ್ಟಿಯ ಆಂತರಿಕ ವಿಚಾರ.. ಕಾದಾಟ ಇರಬಹುದು ಹೊಡೆದಾಟ ಇರಬಹುದು ಘರ್ಷಣೆ ಇರಬಹುದು.. ನಮ್ಮ ಪಕ್ಷಕ್ಕೆ ಸಂಬಂಧಪಟ್ಟದ್ದು, ನಮ್ಮ ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ..
-----------------
ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಿಂದ ಅಹಮದಬಾದ್ಗೆ ಸ್ಥಳಾಂತರ.. ಶಾಸಕರು, ವಿಐಪಿ ಟಿಕೆಟ್ ಹೆಚ್ಚು ಕೇಳಿದ್ದಕ್ಕೆ ಸ್ಥಳಾಂತರ ವಿಚಾರ. ಇರೋದೆ 224 ಅವರ ಫ್ಯಾಮಿಲಿ ಹಿಡಿದ್ರೆ 500 ಆಯ್ತು , 60 ಸಾವಿರ ಕೆಪ್ಯಾಸಿಟಿ ಇದೆ.. ಬಿಸಿಸಿಐ ಅಧ್ಯಕ್ಷರು ಗುಜರಾತಿನವರು ಇದ್ದಾರೆ ತಮ್ಮ ಲಾಭಕ್ಕೆ ಅಲ್ಲಿಗೆ ಸ್ಥಳಾಂತರ ಮಾಡಿರಬಹುದು.. ರಾಜಕೀಯ ಅಂತ ಹೇಳಲು ಆಗಲ್ಲ ಲಾಭಕ್ಕೋಸ್ಕರ ಮಾಡಿರುತ್ತಾರೆ..
----------------------
ಮೇ 15 ಕ್ಕೆ ಇನ್ನೂ ನಾಲ್ಕೇ ದಿನ ಬಾಕಿ ವಿಚಾರ.. ಅದು ವರಿಷ್ಠರಿಗೆ ಬಿಟ್ಟ ವಿಚಾರ ,ಯಾವ ಡೇಟ್ ಯಾವಾಗ ಕರೆಯಬೇಕು.. ಯಾವಾಗ ಸಂಧಾನ ಮಾಡಬೇಕು ಅನ್ನೋದು ಅವರಿಗೆ ಬಿಟ್ಟಿದ್ದು.. ಆದಷ್ಟು ಬೇಗ ಆಗುತ್ತೆ ಇಷ್ಟರವರೆಗೆ ಕಾದಿದ್ದೇವೆ ,ಈಗ ಆಗುತ್ತೆ ಎಲ್ಲಾ ಸರಿಹೊಗುತ್ತೆ.. ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಏನಾಗುತ್ತೋ ನಮಗೆ ಗೊತ್ತಿಲ್ಲ.. ಸರಿ ಆಗಬೇಕು ಅನ್ನೋದಷ್ಟೆ ನಮ್ಮ ವಿನಂತಿ.. ಘರ್ಷಣೆ ,ಗುಡುಗು ,ಮಳೆ ನಿಲ್ಲಬೇಕು ಅನ್ನೋದಷ್ಟೇ ನಮ್ಮ ಪ್ರಾರ್ಥನೆ.. ಗುಡುಗು ಮಳೆ ನಮ್ಮ ಪಕ್ಷದಲ್ಲಿ ನಡೆದಿದೆ ಇಲ್ಲಾ ಅಂತ ಹೇಳಲ್ಲಾ ಒಪ್ಪಿಕೊಳ್ಳುತ್ತೇವೆ.. ಹಿಂದೆನೂ ಒಪ್ಪಿಕೊಳ್ತಿವಿ ,ಇವತ್ತು ಒಪ್ಪಿಕೊಳ್ಳುತ್ತಿವಿ, ನಾಳೆನೂ ಒಪ್ಪಿಕೊಳ್ತಿವಿ..
----------
ಮಲ್ಲಿಕಾರ್ಜುನ ಖರ್ಗೆ ಸಿಎಂ ಆದ್ರೆ ಒಪ್ಪಿಕೊಳ್ಳುತ್ತೇನೆ ಅನ್ನೋ ಜಿ.ಪರಮೇಶ್ವರ ಹೇಳಿಕೆ ವಿಚಾರ.. ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡ್ತಾರೆ ಯಾರು ಇರಬೇಕು, ಯಾರು ಇರಬಾರದು ಅಂತ.. ಹೈಕಮಾಂಡ್ ಅಂತಿಮ ಅಂತ ಸಿದ್ದರಾಮಯ್ಯನವರು ಸಹ ಹೇಳಿದ್ದಾರೆ.. ನಾವೂ ಹೇಳಿದ್ದೇವೆ ಎಲ್ಲರೂ ಹೇಳಿದ್ದಾರೆ ವರಿಷ್ಠರು ಏನ್ ಹೇಳ್ತಾರೆ ಅದೇ ಅಂತಿಮ..