K2 ಪೊಲಿಟಿಕಲ್ ನ್ಯೂಸ್ : 2023 ರ ಚುನಾವಣೆ ರಾಜ್ಯದಲ್ಲಿ ನಡೆಯುತ್ತಿದೆ. ರಾಜಕಾರಣಿಗಳು ತಮ್ಮ ತಮ್ಮ ಪಕ್ಷ ಅಧಿಕಾರಕ್ಕೆ ಸಾಕಷ್ಟು ಪ್ರಚಾರದಲ್ಲಿ ತೊಡಗಿದ್ದು ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಶ್ರೀಕೃಷ್ಣ ದೇವರಾಯರ ಆಡಳಿತ ಬರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಶಿಸಿದ್ದಾರೆ.
ರಾಜ್ಯದಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದ್ದು, ವಿವೇಕಾನಂದರು ಕಂಡ ಹಾಗೆ ದೇಶ ಬದಲಾವಣೆ ಆಗುತ್ತಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್ನ ಆಡಳಿತ ಬೇಡ. ಶ್ರೀಕೃಷ್ಣ ದೇವರಾಯರನ್ನು ಆರಾಧಿಸುವ ಸರ್ಕಾರ ಬರಬೇಕು. ಟಿಪ್ಪು ಸಂತಾನ ಬೇಕಾ?, ಶ್ರೀಕೃಷ್ಣ ದೇವರಾಯರ ಸಂತಾನ ಬೇಕಾ?. ಈ ಬಗ್ಗೆ ಜನರೇ ತೀರ್ಮಾನ ಮಾಡಬೇಕು ಎಂದು ನಳಿನ್ ಹೇಳಿದ್ದಾರೆ.
[ays_poll id=3]