K2kannadanews.in
bangle traders ಸುರಪುರ : ಕ್ಷುಲ್ಲಕ ಕಾರಣಕ್ಕೆ (Chilly reason) ಕುಡಿದ ಮತ್ತಿನಲ್ಲಿ ಇಬ್ಬರು ಬಳೆ ವ್ಯಾಪಾರಿಗಳ ನಡುವೆ ಗಲಾಟೆಯಾಗಿ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ತಿಂಥಣಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ (Yadagiri) ಸುರಪುರ (Surapura) ತಾಲ್ಲೂಕಿನ ತಿಂಥಣಿಯಲ್ಲಿ ನಡೆದಿದೆ. ಅಥಣಿಯ (Athani) ಮಲ್ಲಪ್ಪ (38) ಕೊಲೆಯಾದ ದುರ್ದೈವಿ. ಬಾಗಲಕೋಟೆ (Bagalkote) ಮೂಲದ ಮತ್ತೊಬ್ಬ ಬಳೆ ವ್ಯಾಪಾರಿ ಬುರ್ಯಾನ್ (Buryan)ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರೂ ತಿಂಥಣಿಯ ಐತಿಹಾಸಿಕ ಮೌನೇಶ್ವರ ಜಾತ್ರೆಯಲ್ಲಿ ಬಳೆ ವ್ಯಾಪಾರ ಮಾಡಲು ಬಂದಿದ್ದರು.
ಅಕ್ಕಪಕ್ಕದಲ್ಲೇ ಬಳೆ ಅಂಗಡಿ (Shop) ಹಾಕಿಕೊಂಡಿದ್ದು, ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ (Fight) ಆರಂಭಗೊಂಡಿದೆ. ಗಲಾಟೆ ವೇಳೆ ಮಾತಿಗೆ ಮಾತು ಬೆಳೆದು ಮಲ್ಲಪ್ಪನ ಮೇಲೆ ಬುರ್ಯಾನ್ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ (Spot death). ಘಟನೆಗೆ ಸಂಬಂಧಿಸಿ ಸುರಪುರ ಪೊಲೀಸರು (Police) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬುರ್ಯಾನ್ನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
[ays_poll id=3]