This is the title of the web page
This is the title of the web page
Local News

ಕೆಸರು ಗದ್ದೆಯಾದ ರಸ್ತೆ : ಸಿಲುಕಿಕೊಂಡ ಭತ್ತದ ಲಾರಿ, ಹಿಡಿ ಶಾಪ..


K2kannadanews.in

ರಾಯಚೂರು : ನಗರದ ಗದ್ವಾಲ್ (gadwal) ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು (Deteriorated), ತಗ್ಗು ಗುಂಡಿಯಿಂದ ಕೂಡಿದೆ, ರಸ್ತೆಯು ಕೆಸರು ಗದ್ದೆಯಂತಾಗಿದ್ದು (Muddy road), ಭತ್ತ (pady) ಸಾಗಿಸುತ್ತಿದ್ದ ಲಾರಿಯೊಂದು ಸಿಲುಕಿಕೊಂಡಿದ್ದು, ಹೊರ ತೆಗೆಯಲು ಆಗದೆ ಜಿಲ್ಲಾಡಳಿತಕ್ಕೆ (district administration) ಇಡಿ ಶಾಪ ಹಾಕಿದ ಘಟನೆ ಜರುಗಿದೆ.

ನಗರದ ಬಸವನ ಭಾವಿ ವೃತ್ತದಿಂದ (basavan bhavi cercal) ಗದ್ವಾಲ್ ರಸ್ತೆಗೆ ತೆರಳುವ ತಿರುವಿನಲ್ಲಿ ಭತ್ತದ ಚೀಲ ಸಾಗಿಸುತ್ತಿದ್ದ ಲಾರಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ. ಗದ್ವಾಲ್ ರಸ್ತೆಯು ಸಂಪೂರ್ಣ ಹದಗೆಟ್ಟು ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿವೆ, ಮನೆಗಳ ಚರಂಡಿ ನೀರು ರಸ್ತೆ ಮೇಲೆಯೇ ಹರಿಯುತ್ತಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಸಿಲುಕಿಕೊಂಡ ಲಾರಿ ಹೊರ ತೆಗೆಯಲು ಆಗದೇ ಮತ್ತೊಂದು ಲಾರಿ ತರಿಸಿ ಭತ್ತವನ್ನು ಅನ್‌ಲೋಡ್ ಮಾಡಲಾಯಿತು. ನಂತರ ಲಾರಿಯನ್ನು ಹೊರೆ ತೆಗೆಯಲಾಯಿತು. ಹದಗೆಟ್ಟ ರಸ್ತೆಯಿಂದ ಲಾರಿ ಚಾಲಕ ಮತ್ತು ಹಮಾಲಿಗಳು ಅಧಿಕಾರಿಗಳಿಗೆ ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕಿದರು.


[ays_poll id=3]