This is the title of the web page
This is the title of the web page
Crime News

ಕೌಟುಂಬಿಕ ಕಲಹ : ತಾಯಿ, ಇಬ್ಬರು ಮಕ್ಕಳು ಬಾವಿಗೆ ಹಾರಿ ಆತ್ಮಹತ್ಯೆ


ಲಿಂಗಸೂಗೂರು : ಕೌಟುಂಬಿಕ ಕಲಹ ಹಿನ್ನೆಲೆ ತಾಯಿ, ಇಬ್ಬರು ಮಕ್ಕಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಂದು ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಮ್ಯಾಗಳಪೇಟೆಯ ಹೊಲದಲ್ಲಿನ ಬಾವಿಯೊಳಗೆ ಇಬ್ಬರು ಮಕ್ಕಳೊಂದಿಗೆ ಬಿದ್ದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೌಡಮ್ಮ(೨೬), ಪ್ರೀತಮ್(೪), ರಾಮಣ್ಣ(೨) ಮೃತಪಟ್ಟ ದುರ್ದೈದಿಗಳೆಂದು ಗುರುತಿಸಲಾಗಿದೆ. ಸ್ಥಳಕ್ಕೆ ಮುದಗಲ್ ಪೊಲೀಸರು ದೌಡು, ಪರಿಶೀಲನೆ ಮಾಡುತ್ತಿದ್ದಾರೆ. ಘಟನೆಯಿ‌ಂದ ಮ್ಯಾಗಳಪೇಟೆಯಲ್ಲಿ ಸೂತಕ ಛಾಯೆ ವ್ಯಾಪಿಸಿದ್ದು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.


[ays_poll id=3]