This is the title of the web page
This is the title of the web page
Crime NewsLocal News

ಮಸ್ಕಿ : 9 ವರ್ಷದ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ


ರಾಯಚೂರು : ಹೆತ್ತ ತಾಯಿಯೇ ಮಗಳನ್ನು ನೀರಿನ ಸಂಪಿಗೆ ಎಸೆದು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೂತರ ಬಂಡಿ ಗ್ರಾಮದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದೋತರಬಂಡಿ ಗ್ರಾಮದಲ್ಲಿ ಘಟನೆಎ ಜರುಗಿದೆ. ತಾಯಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದ್ದು, ಶ್ರೀದೇವಿ (9) ಮೃತ ಬಾಲಕಿ. ಮಾನಸಿಕ ಅಸ್ವಸ್ಥೆ ಲಲಿತಮ್ಮ ತನ್ನ ಮಗಳನ್ನು ಮನೆ ಪಕ್ಕದ ನೀರಿನ ಸಂಪಿಗೆ ಎಸೆದು ನಂತರ ತಾನೂ ವಿಷ ಸೇವಿಸಿದ್ದಾಳೆ. ವಿಷಯ ತಿಳಿದ ಅಕ್ಕ ಪಕ್ಕದ ಮನೆಯವರು ಆಕೆಯನ್ನು ಸಿಂಧನೂರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]