K2kannadanews.in
chakkuli death : ದಿನಗೂಲಿ ಕಾರ್ಮಿಕ ನರವ ಚಹಾ (Tea) ಸೇವಿಸುತ್ತಿದ್ದ ವೇಳೆ ಚಕ್ಕುಲಿ (chakkuli) ತಿಂದು ಗಂಟಲಲ್ಲಿ ಸಿಲುಕಿ ಮೃತಪಟ್ಟ ಘಟನೆಯೊಂದು ಮಂಚಿರ್ಯಾಲ್ನಲ್ಲಿ (Mancherial) ನಡೆದಿದೆ
ತೆಲಂಗಾಣದ (telangana) ಮಂಚಿರ್ಯಾಲ್ನಲ್ಲಿ (Mancherial) ನಡೆದಿದ್ದು, ದಿನಗೂಲಿ ಕಾರ್ಮಿಕನಾಗಿದ್ದ ರಂಗಾರಾವ್ ಸಂಜೆ ಎಲ್ಲರೊಂದಿಗೆ ಕುಳಿತು ಚಹಾ ಕುಡಿಯುತ್ತಿದ್ದ ವೇಳೆ ಚಕ್ಕುಲಿ ತಿಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ (few moments) ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಹತ್ತಿರದ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಆದರೇ ವೈದ್ಯರು (doctor) ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮಂಚಿರ್ಯಾಲ್ನ ಹಮಾಲಿವಾಡದ ಎನ್ ರಂಗರಾವ್ (65) ಮೃತ ದುರ್ಥೈವಿ ಎಂದು ಹೇಳಲಾಗುತ್ತಿದೆ.
ಚಹಾ ಸೇವನೆ ವೇಳೆ ಚಕ್ಕುಲಿ ತಿಂದಾಗ ಅದು ಗಂಟಲಲ್ಲಿ (throat) ಸಿಲುಕಿ ಉಸಿರಾಟ ಸಮಸ್ಯೆ (Breathing problem) ಉಂಟಾಗಿದ್ದರಿಂದ, ರಂಗರಾವ್ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ (primary Investigation) ತಿಳಿದು ಬಂದಿದೆ. ಈ ಕುರಿತು ಮಂಚಿರ್ಯಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
[ays_poll id=3]