K2kannadanews.in
JOURNALIST ATTACKED : ಮದ್ಯ ಮಾರಾಟದ ಉಲ್ಲಂಘನೆ ಪತ್ರಕರ್ತರೊಬ್ಬರ (Journalist)ಮೇಲೆ ಅಪರಿಚಿತರ ಗುಂಪೊಂದು ಅಮಾನುಷವಾಗಿ ಹಲ್ಲೆ (Inhuman assault) ನಡೆಸಿದ್ದು, ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ತಮಿಳುನಾಡು (Thamilunadu) ರಾಜ್ಯದ ತಿರುಪ್ಪೂರ್ ಜಿಲ್ಲೆಯ ದೂರದರ್ಶನ ಪತ್ರಕರ್ತ(Reporter) ನೇಸಾ ಪ್ರಭು ಅವರು ಮದ್ಯ ಮಾರಾಟದ ಉಲ್ಲಂಘನೆ ಮತ್ತು ಅವ್ಯವಹಾರಗಳ ಬಗ್ಗೆ ವರದಿ ಮಾಡುತ್ತಿದ್ದಾಗ ಘಟನೆ ನಡೆದಿದೆ ಎಂದು ಸ್ಥಳೀಯ ಪತ್ರಕರ್ತರು ಹೇಳಿದ್ದಾರೆ. ವರದಿಗಾರ ಪೊಲೀಸ್ (Police) ಕಂಟ್ರೋಲ್ ರೂಂಗೆ (Controol rom)ಪದೇ ಪದೇ ಕರೆಗಳನ್ನು ಮಾಡಿದರೂ ಕೂಡಾ ಆತನ ಸಹಾಯಕ್ಕೆ ಬರಲಿಲ್ಲ ಎಂದು ಆರೋಪಿಸಲಾಗಿದೆ.
ಪ್ರಭು ನಂಬರ್ ಪ್ಲೇಟ್ (Number Plate) ಇಲ್ಲದ ಬೈಕ್ಗಳಲ್ಲಿ ಬಂದಿರುವ ವ್ಯಕ್ತಿಗಳ ಗುಂಪೊಂದು ತಮ್ಮನ್ನು ಹಿಂಬಾಲಿಸುತ್ತಿದ್ದ (Following) ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಸಹಾಯಕ್ಕೆ ಬರುವಂತೆ (Ask Help)ಕೋರಿದ್ದರು. ಆದರೆ ಅವರು ಹತ್ತಿರದ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸುವಂತೆ ತಿಳಿಸಿ ನಿರ್ಲಕ್ಷ್ಯವಹಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ಆಡಿಯೋ (Audio) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
[ays_poll id=3]