This is the title of the web page
This is the title of the web page
Crime NewsState News

ಬಾಣಂತಿ ಪತ್ನಿಗೆ ಕೊಂದು, ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ..


K2kannadanews.in

Murder ನ್ಯೂಸ್ : ಆತ್ಮಹತ್ಯೆ(suicide) ಎಂದು ಬಿಂಬಿಸಲಾಗಿದ್ದ ಬಾಣಂತಿ ಸಾವಿಗೆ ಟ್ವಿಸ್ಟ್ (twist) ದೊರೆತಿದೆ. ಮಗುವಿನ ಕಿರಿಕಿರಿಗೆ ಬಾಣಂತಿಯನ್ನೇ ಪತಿ ಹತ್ಯೆ(Murder case) ಮಾಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ (police investigation) ಬಯಲಾಗಿದ್ದು, ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ.

ನಗರದ ಖಾಸಗೀ ಲಾಡ್ಜ್ ವೊಂದರಲ್ಲಿ ಕಳೆದ ಡಿ.13 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಉತ್ತರ ಪ್ರದೇಶ (uthara pradesh)ಮೂಲದ ಮಹಿಳೆ ಸೋನಿ (soni) ಮೃತ ದುರ್ದೈವಿಯಾಗಿದ್ದು. ಪತಿ ಅವಿನಾಶ್‌ನಿಂದಲೇ (avinash) ಸೋನಿ ಹತ್ಯೆ ಆಗಿದ್ದಳು. ಆದ್ರೆ ಬಾಣಂತಿ ಕೊಂದು ಅವಿನಾಶ್‌ ಸಿಜೇರಿಯನ್ (Cesarean) ನೋವು ತಾಳಲಾರದೆ, ಆತ್ಮಹತ್ಯ ಕಥೆ (story) ಕಟ್ಟಿದ್ದ. ಸವಿಗೂ ಮುನ್ನ 20ದಿನದ ಹಿಂದಷ್ಟೆ ಸೋನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಈ ಅವಿನಾಶ್‌ ಹಸಗೂಸು ಕಿರಿಕಿರಿ ಮಾಡುವುದರಿಂದ ಸಿಡುಕುತ್ತಿದ್ದ.

ಇಷ್ಟಲ್ಲದೆ ಮಗು ಹುಟ್ಟಿದ ಬಳಿಕ ಆರ್ಥಿಕ ಪರಿಸ್ಥಿತಿ ಬಿಗಾಡಿಯಿಸಿತ್ತು. ಇದೇ ಅವಿನಾಶ್‌ ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿ, ಅಂತೆಯೇ ಪತ್ನಿ ಸೋನಿಯಾಳ ಕತ್ತು ಹಿಸುಕಿ ಕೊಲೆಗೈದು, ಫ್ಯಾನ್‌ಗೆ ನೇಣು ಬಿಗಿದಿದ್ದ ಎಂಬುದು ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಸದ್ಯ ರಾಯಚೂರು ಪಶ್ಚಿಮ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಮಹಿಳಾ ಪೊಲೀಸ್ ಠಾಣೆಗೆ ಕೊಲೆ ಕೇಸ್ ಆಗಿ ವರ್ಗಾವಣೆಗೊಂಡಿದೆ. ಆರೋಪಿ ಅವಿನಾಶ್‌ನನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.


[ays_poll id=3]