K2kannadanews.in
Crime News : ಇತ್ತೀಚಿನ ದಿನಗಳಲ್ಲಿ (Now a days) ಗಂಡ ಹೆಂಡತಿ ಮಧ್ಯ ತಾಳ್ಮೆ, ಹೊಂದಾಣಿಕೆ (Adjustment) ಹೋಗಿ ಅನುಮಾನ ಹುಟ್ಟಿಕೊಂಡು, ಪರಸ್ಪರ ಸಾಯಿಸುವಷ್ಟರ (Kill) ಮಟ್ಟಿಗೆ ಹೋಗಿದೆ ಸಂಸಾರ. ಇಲ್ಲೊಬ್ಬ ಭೂಪ ಹೆಂಡತಿ ಮೇಲೆ ಕುಪಗೊಂಡು ತುಂಬಿದ ಮಾರುಕಟ್ಟೆಯಲ್ಲಿ ಸುಮಾರು 19 ಬಾರಿ ಕತ್ತರಿಯಿಂದ ಇರಿದು (Man Stabs Wife) ಕ್ರೌರ್ಯ ಮೆರೆದಿದ್ದಾನೆ.
ಉತ್ತರ ಪ್ರದೇಶದಲ್ಲಿನ (Uttar Pradesh) ಈ ಭೀಕರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ ಆಗಿದೆ. ಇನ್ನು ತುಂಬಿದ ಮಾರುಕಟ್ಟೆಯಲ್ಲಿ (Market) ಹೆಂಡತಿಗೆ ಇರಿದ ಪತಿ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಸುಮನ್ ನಿಶಾದ್ ಎಂಬ ಮಹಿಳೆಯು ಲಖನೌ (Laknow) ನಗರದ ಕುತುಬ್ಪುರ ಪ್ರದೇಶ ವ್ಯಾಪ್ತಿಯ ಲಂಬೆಕೇಶ್ವರ ಪಾರ್ಕ್ನಲ್ಲಿ ತರಕಾರಿ (Vegetables) ಖರೀದಿಸಲು ತೆರಳಿದ್ದಾರೆ. ಅವರು ತರಕಾರಿ ಖರೀದಿಸುತ್ತಿರುವಾಗಲೇ ಪತಿ ಬ್ರಿಜ್ಮೋಹನ್ ನಿಶಾದ್ ಎಂಬಾತನು ಬಂದಿದ್ದಾನೆ. ಪತ್ನಿಯನ್ನು ಕಾಣುತ್ತಲೇ ಪತಿ (Husband) ಕುಪಿತಗೊಂಡಿದ್ದಾನೆ. ಕೂಡಲೇ ಪತ್ನಿಗೆ ಕತ್ತರಿಯಿಂದ ಇರಿದಿದ್ದಾನೆ. ಸುಮಾರು 19 ಬಾರಿ (19 times) ಇರಿದಿದ್ದಾನೆ. ಅಲ್ಲಿದ್ದ ಜನ ಇದನ್ನು ಕಂಡು ದಂಗಾಗಿದ್ದು, ಯಾರೂ ಮಹಿಳೆಯನ್ನು ರಕ್ಷಿಸಿಲ್ಲ ಎಂದು ತಿಳಿದುಬಂದಿದೆ.
11 सेकेंड में 19 बार कैंची मारी –
ये सीन उत्तर प्रदेश की राजधानी लखनऊ का है। पत्नी सुमन पर हमले के जुर्म में पति बृजमोहन निषाद गिरफ्तार हुआ। पारिवारिक विवाद में वारदात की। महिला गंभीर घायल है। pic.twitter.com/R56ILu39jh
— Sachin Gupta (@SachinGuptaUP) January 12, 2024
ಕತ್ತರಿಯಿಂದ ಸತತವಾಗಿ ಇರಿತಕ್ಕೊಳಗಾದ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಕೆಜಿಎಂಯು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪರಿಸ್ಥಿತಿ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಬ್ರಿಜ್ಮೋಹನ್ ನಿಶಾದ್, ಹೆಂಡತಿಯ ವಿಚಾರದಲ್ಲಿ ವಿಪರೀತ ಅನುಮಾನ ಪಡುತ್ತಿದ್ದ. ಪತ್ನಿಯ ಸಂಬಂಧಗಳ ಬಗ್ಗೆ ಶಂಕಿಸಿ ಅವರ ಜತೆ ಜಗಳವಾಡುತ್ತಿದ್ದ. ಪತ್ನಿಯ ಶೀಲವನ್ನೇ ಶಂಕಿಸಿದ್ದ ಆತ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈಗ ಕೊನೆಗೆ ಇದೇ ಕಾರಣಕ್ಕೆ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.
[ays_poll id=3]