This is the title of the web page
This is the title of the web page
Local NewsState News

ವರದಿಯಿಂದ ಎಚ್ಚೆತ್ತ ಇಲಾಖೆ ಅಧಿಕಾರಿಗಳು : ವಾರ್ಡನ್ ವರ್ಗಾವಣೆ..


K2kannadanews.in

ರಾಯಚೂರು : ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಪರದಾಡುತ್ತಿರುವ ಹಾಸ್ಟೆಲ್ (water problem in hostel) ವಿದ್ಯಾರ್ಥಿನಿಯರ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ (news telecast), ಎಚ್ಚೆತ್ತ ಇಲಾಖೆ ಅಧಿಕಾರಿಗಳು ವಾರ್ಡನ್ ಗಿರಿಜಾ ಮೇಡಂ ಅವರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ (administrative purposes) ಬೇರೊಂದು ವಸತಿನಿಲಯಕ್ಕೆ ವರ್ಗಾವಣೆ ( transfer for another hostel) ಮಾಡಿ ಆದೇಶ ಹೊರಡಿಸಿದ್ದಾರೆ.

ನಗರದ ಹೊರ ವಲಯದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು, ವಸತಿನಿಲಯದಲ್ಲಿ ಸಮಸ್ಯೆಗಳ ಸರಮಾಲೆ ಎದುರಿಸುತ್ತಿದ್ದರು, ಈ ಬಗ್ಗೆ ನಿಮ್ಮ ಮಾಧ್ಯಮಗಳಲ್ಲಿ ಸವಿಸ್ತಾರವಾಗಿ ವಾರ್ಡನ್ ಮೇಡಂ ಅವರ ಅವಾಂತರಗಳನ್ನು ಬಿತ್ತರಿಸಿತ್ತು. ಹಾಸ್ಟೆಲ್ ನಿರ್ವಹಣೆ ಮತ್ತು ವಿದ್ಯಾರ್ಥಿಗಳಿಗೆ ಊಟ ಉಪಚಾರದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೆ, ವಿದ್ಯಾರ್ಥಿಗಳೊಂದಿಗೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದರು. ಇದರಿಂದ ವಿದ್ಯಾರ್ಥಿಗಳು ಅಸಮಾಧಾನಗೊಂಡು ಪ್ರತಿಭಟನೆ ಮಾಡಿರುವ ವಿಚಾರ ಬಿತ್ತರಿಸಲಾಗಿತ್ತು.

ವರದಿ ಬಿತ್ತರವಾದ ಬೆನ್ನಲ್ಲೆ ಎಚ್ಚೆತ ಅಧಿಕಾರಿಗಳು, ಗಿರಿಜಾ ಮೇಡಂ ಅವರನ್ನು ಆಡಳಿತಾತ್ಮಕ ಹಿತ ದೃಷ್ಟಿಯಿಂದ, ಈ ಒಂದು ವಸತಿ ನಿಲಯದಿಂದ ಬೇರೊಂದು ವಸತಿ ನಿಲಯಕ್ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.


[ays_poll id=3]