This is the title of the web page
This is the title of the web page
Crime NewsState News

ವೇತನವಿಲ್ಲದೆ ಮನನೊಂದು ಅತಿಥಿ ಶಿಕ್ಷಕ ಆತ್ಮಹತ್ಯೆ..


ಸಿಂಧನೂರು : ವೇತನವಿಲ್ಲದೆ ಮನನೊಂದು ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನಗರದ ವಾರ್ಡ್ ನಂ.17ರ ಗಂಗಾನಗರದಲ್ಲಿ ನಡೆದಿದೆ. ಮೃತ ಅತಿಥಿ ಉಪನ್ಯಾಸಕ ಶಿವಪುತ್ರಪ್ಪ(47) ಎಂದು ತಿಳಿದು ಬಂದಿದೆ. ಮೃತ ಅತಿಥಿ ಉಪನ್ಯಾಸರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಮೃತ ಶಿವಪುತ್ರಪ್ಪ ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.ಕಳೆದ 9 ತಿಂಗಳು ಹುಣಸಗಿಯಲ್ಲಿ, 8 ತಿಂಗಳು ಸಿಂಧನೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆನ್‍ಲೈನ್ ಮೂಲಕ ತೆಕ್ಕಲಕೋಟೆ ಸರ್ಕಾರಿ ಕಾಲೇಜಿಗೆ ನೇಮಕಗೊಂಡಿದ್ದರು. ಆದರೆ, ಇನ್ನೂವರೆಗೂ ಸಂಬಳ ಆಗಿಲ್ಲ ಎಂದು ಹೇಳಲಾಗಿದ್ದು, ಅದಕ್ಕಾಗಿಯೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸರು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಶಿವಪುತ್ರಪ್ಪ ಗುಂಡಸಾಗರ ಅವರ ಪತ್ನಿ ಶಶಿಕಲಾ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.


[ays_poll id=3]