K2kannadanews.in
farmer death ದೇವದುರ್ಗ : ಕೊಳವೆ ಬಾವಿಗೆ(tube well) ಅಳವಡಿಸಿದ್ದ ವಿದ್ಯುತ್ ತಂತಿ (electric wire) ಸ್ಪರ್ಶಿಸಿ ರೈತ ಮೃತಪಟ್ಟ ಘಟನೆ ದೇವತಗಲ್ ಗ್ರಾಮದಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ದೇವತಗಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಅಯ್ಯಪ್ಪ ನಾಯಕ್(Ayyappa nayak 38) ಮೃತ ರೈತ ಎಂದು ಗುರುತಿಸಲಾಗಿದೆ. ಮೂರು ಎಕರೆ ಜಮೀನಿನಲ್ಲಿ ಭತ್ತ (Pady) ಬೆಳೆದಿದ್ದ ರೈತ, ಬೆಳಗಿನ ಜಾವ (early morning) ಗದ್ದೆಗೆ ನೀರು ಹಾಯಿಸಲು ಹೋದಾಗ ಘಟನೆ ನಡೆದಿದೆ.
ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ (Health center) ಕೂಡಲೇ ಕರೆದೊಯ್ದರು ಅಷ್ಟರಲ್ಲಾಗಲೆ ರೈತ ಮೃತಪಟ್ಟಿದ್ದ. ಆರೋಗ್ಯ ಕೇಂದ್ರಕ್ಕೆ ದೇವದುರ್ಗ ಶಾಸಕಿ (MLA) ಕರೆಮ್ಮ ನಾಯಕ್ ಭೇಟಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಸರ್ಕಾರದಿಂದ (government) ಸಿಗುವ ಸೌಲಭ್ಯಗಳನ್ನ (Facility) ರೈತನ ಕುಟುಂಬಕ್ಕೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
[ays_poll id=3]