K2kannadanews.in
Ask authorities to arrest ಸಿಂಧನೂರು : ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ನಿರ್ಲಕ್ಷ ತೋರಿದ ಹಾಸ್ಟೆಲ್ (hostel) ವಾರ್ಡನ್ ಮತ್ತು ತಾಲೂಕು ಅಧಿಕಾರಿಯನ್ನು ಅರೆಸ್ಟ್ (arrest) ಮಾಡುವಂತೆ ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ ಪೋಷಕರು.
ಕಳೆದ ರಾತ್ರಿ ಸಿಂಧನೂರು ನಗರದ ಅಂಬೇಡ್ಕರ್ ವಸತಿ ನಿಲಯದ ಶೌಚಾಲಯದಲ್ಲಿ, ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ವಾರ್ಡನ್ ಕಿರುಕುಳಕ್ಕೆ ಎಂದು ಆಪಾದಿಸಿ ಪೊಲೀಸ್ ಠಾಣೆಯಲ್ಲಿ ತಾಯಿ(Mother) ದೂರು ದಾಖಲಿಸಿದ್ದರು. ಆಸ್ಪತ್ರೆಯ ಶವಗಾರದ ಮುಂದೆ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ (Protest) ಮಾಡಿ ಇಬ್ಬರು ಅಧಿಕಾರಿಗಳನ್ನು ಅರೆಸ್ಟ್ ಮಾಡುವವರಿಗೆ, ನಾವು ಶವ ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಪೊಲೀಸರು ಅದಷ್ಟೇ ಮನವೊಲಿಸುವ ಕೆಲಸ ಮಾಡಿದರು ಮಾತು ಕೇಳುತ್ತಿಲ್ಲ ಪೊಷಕರು.
[ays_poll id=3]