K2kannadanews.in
BJP-JDS meeting ರಾಯಚೂರು : ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ- ಜೆಡಿಎಸ್ (BJP-JDS) ಸಮನ್ವಯ ಸಭೆ (coordination meeting) ಮಾಡಲಾಯಿತು. ಇನ್ನು ಸಭೆಯಿಂದ ಟಿಕೆಟ್ ಕೈ ತಪ್ಪಿದ ಅಸಮಾಧಾನಿತ ಬಿ.ವಿ ನಾಯಕ ಅವರು ದೂರ ಉಳಿದಿದ್ದು, ಬಿಜೆಪಿಯಲ್ಲಿ ಇನ್ನೂ ಟಿಕೆಟ್ ಅಸಮಧಾನ ಮುಂದುವರೆದಿದೆ.
ಹೌದು ರಾಯಚೂರು (Raichur) ನಗರದ ಖಾಸಗಿ ಹೋಟೆಲ್ (Hotel) ನಲ್ಲಿ ನಡೆದ ಸಮನ್ವಯ ಸಭೆ ಆಯೋಜನೆ ಮಾಡಲಾಗಿತ್ತು. ಈ ಒಂದು ಸಭೆಯಲ್ಲಿ ರಾಯಚೂರು – ಯಾದಗಿರಿ (Yadgiri) ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್ ಉಬಯ ಪಕ್ಷಗಳ ಜಿಲ್ಲಾಧ್ಯಕ್ಷರು, ಶಾಸಕರು (MLA), ಮಾಜಿ ಶಾಸಕರು, ಮುಖಂಡರು ಭಾಗಿಯಾಗಿದ್ದರು. ಆದ್ರೆ ಅಸಮಾಧಾನ ಗೊಂಡ ಮಾಜಿ ಸಂಸದ (Ex MP) ಬಿ.ವಿ ನಾಯಕ್ ಸಭೆಯಿಂದ ಹೊರಗುಳಿದಿದ್ದು ನೋಡಿದರೆ ಬಿ ವಿ ನಾಯಕ್ ಅವರನ್ನು ಕಡೆಗಣಿಸಲಾಗುತ್ತಿದೆಯಾ ಅಂತ ಕ್ಷೇತ್ರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
[ays_poll id=3]