K2kannadanews.in
Political News : ಆಡಳಿತರೂಢ ಕಾಂಗ್ರೆಸ್ (Congress) ಶಾಸಕರಿಗೆ ರಾಜ್ಯ ಸರ್ಕಾರ (State Government) ಗಣರಾಜೋತ್ಸವ ದಿನವೇ ಗುಡ್ ನ್ಯೂಸ್ (good news) ನೀಡಿದ್ದು, 32 ಶಾಸಕರು ಹಾಗೂ 39 ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಿ ಘೋಷಣೆ ಮಾಡಿದ್ದು, ರಾಯಚೂರು ಜಿಲ್ಲೆಗೂ ಒಂದು ನಿಗಮ ಮಂಡಳಿ ಸ್ಥಾನ ಒಲಿದಿದೆ.
ಹೌದು ಸಿಎಂ ಸಿದ್ದರಾಮಯ್ಯ (Siddramayya) ಮತ್ತು ಡಿಕೆ ಶಿವಕುಮಾರ್ (D K Shivakumar) ಜಂಟಿಯಾಗಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ (List) ಶಾಸಕರನ್ನು (MLA) ಆಯ್ಕೆ ಮಾಡಿ ಅವರ ಹೆಸರಿನ ಮುಂದೆ ನಿಗಮ/ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಸೂಚಿಸಿ ಸಂಪುಟ ದರ್ಜೆಯ (Cabinet grade) ಸ್ಥಾನಮಾನದೊಂದಿಗೆ ಆದೇಶ ಹೊರಡಿಸಿದೆ. ಇನ್ನು ಈ ಒಂದು ಅಧ್ಯಕ್ಷರ ಅವಧಿ ಎರಡು ವರ್ಷಗಳ ಅವಧಿಗೆ ನೇಮಿಸಿ ಆದೇಶ ಹೊರಡಿಸಿದೆ. ರಾಯಚೂರು ಜಿಲ್ಲೆಯ ಸಿಂಧನೂರು (Sindhnur MLA) ವಿಧಾನಸಭಾ ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ನಿಗಮ ಮಂಡಳಿ ಸ್ಥಾನ ನಿಗದಿಯಾಗಿದೆ. ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ.
[ays_poll id=3]