K2 ಕ್ರೈಂ ನ್ಯೂಸ್ : ದೀಪಾವಳಿ(diwali) ಹಬ್ಬದ ದಿನದಂದೇ, ಘೋರ ಕೃತ್ಯವೊಂದು ಜರುಗಿದೆ. ಮಹಿಳೆಯ(women) ದೇಹದ ಭಾಗಗಳು ಸುಟ್ಟ ಸ್ಥಿತಿಯಲ್ಲಿ ದೊರಕಿದ ಘಟನೆ ಬೋಗಾರಂ(bogaram) ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು ನಾರಾಯಣಪೇಟೆ(Narayanapet) ಜಿಲ್ಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ದುರಂತವೊಂದು ನಡೆದಿದೆ. ಮಹಿಳೆಯ ಮೇಲೆ ಪೆಟ್ರೋಲ್(petrol) ಸುರಿದು ಸುಟ್ಟು ಹಾಕಲಾಗಿದೆ. ಮಹಿಳೆಯನ್ನು ಗುಂಡಿಟ್ಟು ಕೊಂದಿರುವ ಅನುಮಾನ ಮೂಡಿದ್ದು, ಭೀಕರ ಘಟನೆ ನಾರಾಯಣಪೇಟೆ ಜಿಲ್ಲೆಯ ಗುಂಡುಮಾಲ್ ಮಂಡಲದ ಬೋಗಾರಂ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಹೊರವಲಯದ ಮುಖ್ಯರಸ್ತೆಯ(main road) ಮೋರಿ ಬಳಿ ಸುಟ್ಟ ದೇಹದ ಭಾಗಗಳನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ(murder) ಹೇಗೆ ನಡೆದಿದೆ ಎಂಬ ಬಗ್ಗೆ ಕ್ಲೂ ಟೀಂ ಹಾಗೂ ಶ್ವಾನದಳ ತನಿಖೆ ನಡೆಸುತ್ತಿದೆ ಎನ್ನಲಾಗಿದೆ.
[ays_poll id=3]