This is the title of the web page
This is the title of the web page
State News

ಬೀದರ್‌-ಯಶವಂತಪುರ : ವಾಯಾ ರಾಯಚೂರು ರೈಲು ಸಂಚಾರಕ್ಕೆ ಹಸಿರು ನಿಶಾನೆ


K2 ನ್ಯೂಸ್ ಡೆಸ್ಕ್ : ಕಲಬುರಗಿ ಹಾಗೂ ಬೀದರ್‌ ಜನತೆಯ ಬೇಡಿಕೆಯಂತೆ ಬೀದರ್‌-ಯಶವಂತಪುರ ವಾಯಾ ಕಲಬುರಗಿ, ಹುಮನಾಬಾದ ರಾಯಚೂರು ಮಾರ್ಗವಾಗಿ ಬೆಂಗಳೂರಿಗೆ ರೈಲು ಮಂಜೂರಾತಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಸದ್ಯ ವಾರಕೊಮ್ಮೆ ಚಲಿಸುವ ಈ ರೈಲು ಮುಂದಿನ ಕೆಲವೆ ಕೆಲವು ದಿನಗಳಲ್ಲಿ ವಾರಪೂರ್ತಿ ಚಲಿಸುತ್ತದೆ, ಈ ಕೆಲಸವು ಪ್ರಕ್ರಿಯೆಯಲ್ಲಿದೆ ಜೊತೆಗೆ ತಮ್ಮೇಲ್ಲರ ಆಸೆಯಂತೆ ಹೆಚ್ಚಿನ ಬದಲಾವಣೆಗಳು ಈ ರೈಲಿನಲ್ಲಿ ಆಗಲಿವೆ ಎಂದಿದ್ದಾರೆ.

ಸದ್ಯ ಈ ಹೊಸ ರೈಲು ಪ್ರತಿ ಶನಿವಾರ ರಾತ್ರಿ 11.15ಕ್ಕೆ ಯಶವಂತಪೂರನಿಂದ ಹೊರಟು ಯಲಹಂಕ, ಗೌರಿಬಿದನೂರ, ಗುಂತ್ಕಲ್, ಮಂತ್ರಾಲಯಂ ರೊಡ್, ರಾಯಚೂರ, ಯಾದಗಿರಿ, ಕಲಬುರಗಿ, ಕಮಲಾಪೂರ, ಹುಮನಾಬಾದ ಮಾರ್ಗವಾಗಿ ಮರುದಿನ ಮಧ್ಯಾಹ್ನ 01.30ಕ್ಕೆ ಬೀದರ್‌ ತಲುಪಲಿದೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಬೀದರ್‌ನಿಂದ ಹೊರಟು ಬಂದ ಮಾರ್ಗವಾಗಿಯೇ ಸೋಮವಾರ ನಸುಕಿನ ಜಾವ 4ಕ್ಕೆ ಯಶವಂತಪೂರ ತಲುಪಲಿದೆ.


[ays_poll id=3]