K2 ನ್ಯೂಸ್ ಡೆಸ್ಕ್ : ಐಸಿಸ್ ಉಗ್ರರ ಚಟುವಟಿಕೆ ದೆಹಲಿಯಲ್ಲಿ ನಡೆಸುತ್ತಿದೆ, ಎಂಬ ಮಾಹಿತಿ ಬೆನ್ನಲ್ಲೇ ಭಯೋತ್ಪಾದನಾ ನಿಗ್ರಹ ದಳ ಹೈ ಅಲರ್ಟ್ ಆಗಿದ್ದು, ಉಗ್ರರರ ಸುಳಿವು ನೀಡಿದವ್ರಿಗೆ 3 ಲಕ್ಷ ಬಹುಮಾನ ಘೋಷಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಉಗ್ರರ ಚಟುವಟಿಕೆ ಬಗ್ಗೆ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸುತ್ತಿದೆ. ಈ ವೇಳೆ ದೆಹಲಿಯಲ್ಲಿ ಉಗ್ರರ ಚಟುವಟಿಕೆ ನಡೆಯುತ್ತಿರುವ ಬೆನ್ನಲ್ಲೇ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪುಣೆ ಐಸಿಸ್ ಮೊಡ್ಯುಲ್ ಕೇಸ್ನ ಮೂವರು ಉಗ್ರರಾದ ಎಂಡಿ ಶಾನವಾಜ್ ಸಫಿಯುಝಾಮ ಆಲಂ ಅಲಿಯಾಸ್ ಅಬ್ದುಲ್ಲಾ, ರಿಜ್ವಾನ್ ಅಬ್ದುಲ್ ಹಾಜಿ ಅಲಿ ಮತ್ತು ಅಬ್ದುಲ್ಲಾ ಫೈಯಾಜ್ ಶೇಖ್ಗಾಗಿ ಹುಡುಕಾಟ ನಡೆಸಿದೆ.
ಈ ಮೂವರು ಉಗ್ರರಲ್ಲಿ ಒಬ್ಬರ ಸುಳಿವನ್ನು ನೀಡಿದರೂ 3 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ. ಈ ಸಂಬಂಧ ಪುಣೆ ಪೊಲೀಸರು ಮತ್ತು ಎನ್ಐಎ ಈ ಹಿಂದೆ ದೆಹಲಿಯ ಕೆಲವು ಪ್ರದೇಶಗಳ ಮೇಲೆ ದಾಳಿ ನಡೆಸಿದ್ದವು. ಆದರೆ ಯಾವುದೇ ಸಾಕ್ಷಿಗಳು ಸಿಕ್ಕಿರಲಿಲ್ಲ. ಗುಪ್ತಚರ ಸಂಸ್ಥೆಗಳೂ ಶೋಧ ಕಾರ್ಯದಲ್ಲಿ ತೊಡಗಿವೆ.
[ays_poll id=3]