
K2 ಕ್ರೈಂ ನ್ಯೂಸ್ : ಅರ್ಧ ಗಂಟೆಯಲ್ಲಿ 90 ಎಂಎಲ್ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದ ವ್ಯಕ್ತಿ, ಕುಡಿದ ಬಳಿಕ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಸಿಗರನಹಳ್ಳಿಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿಗೆ ತಿಮ್ಮೇಗೌಡನ(60) ಕುಟುಂಬಸ್ಥರು ಗಣೇಶ ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ದೇವರಾಜ್ ಎಂಬಾತನ ಜತೆ ತಿಮ್ಮೇಗೌಡ ಬೆಟ್ಟಿಂಗ್ ಕಟ್ಟಿದ್ದ. 30 ನಿಮಿಷದಲ್ಲಿ 90 ಮಿ.ಲೀ.ನ 10 ಪ್ಯಾಕೆಟ್ ಮದ್ಯ ಕುಡಿಯುವ ಚಾಲೆಂಜ್ನಲ್ಲಿ ಗೆಲ್ಲಲು ಇಬ್ಬರೂ ಮದ್ಯ ಸೇವಿಸಿದ್ದರು. ನಂತರ ತಿಮ್ಮೇಗೌಡ ರಕ್ತ ವಾಂತಿ ಮಾಡಿಕೊಂಡು ಬಸ್ ನಿಲ್ದಾಣದಲ್ಲೇ ಅಸ್ವಸ್ಥರಾಗಿ ಬಿದ್ದಿದ್ದ. ಆತನನ್ನು ಗ್ರಾಮಸ್ಥರು ಮನೆಗೆ ಕರೆದೊಯ್ದು ಬಿಟ್ಟಿದ್ದರು.
ಈ ವೇಳೆ ತಿಮ್ಮೇಗೌಡ ಮನೆಯಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಬೆಟ್ಟಿಂಗ್ ಕಟ್ಟಿದ್ದ ದೇವರಾಜ್ ಹಾಗೂ ಮದ್ಯದ ಪ್ಯಾಕೆಟ್ ನೀಡಿದ್ದ ಕೃಷ್ಣೇಗೌಡ ಎಂಬುವವರ ವಿರುದ್ಧ ಮೃತ ತಿಮ್ಮೇಗೌಡರ ಪುತ್ರಿ ದೂರು ನೀಡಿದ್ದಾರೆ.
![]() |
![]() |
![]() |
![]() |
![]() |
[ays_poll id=3]