K2kannadanews.in
Crime News ಮಸ್ಕಿ : ಕರ್ತವ್ಯ ನಿರ್ವಹಿಸುತ್ತಿದ್ದ (On Duty) ವೇಳೆ ಪ್ರಭಾರ ಮುಖ್ಯಶಿಕ್ಷಕ ಶಾಲೆಯಲ್ಲೇ (incharge head master) ಹಠಾತ್ ಹೃದಯಘಾತದಿಂದ ಮೃತಪಟ್ಟ (Died of heart attack) ಘಟನೆ ಗದ್ರಟಗಿ ಗ್ರಾಮದಲ್ಲಿ ಜರುಗಿದ್ದು, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಹೌದು ರಾಯಚೂರು ಜಿಲ್ಲೆಯ ಮಸ್ಕಿ (Maski) ತಾಲೂಕಿನ ಗದ್ರಟಗಿ ಗ್ರಾಮದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (Government School) ಪ್ರಭಾರ ಮುಖ್ಯಶಿಕ್ಷಕ ಸುರೇಶ(Suresh 57) ಹೃದಯಘಾತದಿಂದ ಮೃತಪಟ್ಟಿದ್ದಾರೆ. ಶಾಲೆ ಆರಂಭವಾಗುತ್ತಿದ್ದಂತೆ ಮೊದಲ ತರಗತಿ (after class) ಮುಗಿಸಿಕೊಂಡು ಬಂದು ಕಚೇರಿಯಲ್ಲಿ ಕುಳಿತಿದ್ದ ಮುಖ್ಯೋಪಾಧ್ಯಾಯ ಸುರೇಶ ಅವರು, ಶಾಲೆಗೆ ಸಂಬಂಧಿಸಿದ ಮಾಹಿತಿ ಪುಸ್ತಕದಲ್ಲಿ ಬರೆಯುತ್ತಿದ್ದರು, ಈ ವೇಳೆ ಹಠಾತ್ ಹೃದಯಾಘಾತವಾಗಿದೆ.
ಕುಳಿತ ಛೇರಿನ ಮೇಲೆಯೇ ಮೃತಪಟ್ಟಿದ್ದಾರೆ.ಹ ಠಾತ್ ನಿಧನದಿಂದ ಶಾಲೆಯ ಶಿಕ್ಷಕರು (teacher’s), ಇಡೀ ಶಾಲೆ ಮಕ್ಕಳ(students) ಮತ್ತು ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
[ays_poll id=3]