This is the title of the web page
This is the title of the web page
Crime NewsState News

ಹಳೆಯ ವೈಷಮ್ಯಕ್ಕೆ ದಾಯಾದಿಗಳಿಂದಲೇ ಕೊಲೆಯಾದ ವ್ಯಕ್ತಿ


K2kannadanews.in

(Crime News)ರಾಯಚೂರು : ಹಳೆಯ ವೈಷಮ್ಯ (old feud) ಹಿನ್ನೆಲೆ ಶುರುವಾದ ದಾಯಾದಿಗಳ ಕಲಹ (Strife) ಕೊಲೆಯಲ್ಲಿ ಅಂತ್ಯವಾಗಿದೆ(ends in murder). ನಿಲವಂಜಿ (Nilavanji) ಗ್ರಾಮದಲ್ಲಿ ಹಳೆಯ ವೈಷಮ್ಯ ಹಿನ್ನೆಲೆ ಸಂಬಂಧಿಕರೇ ವ್ಯಕ್ತಿಯನ್ನ ಕೊಚ್ಚಿ ಕೊಲೆ (person was hacked to death) ಮಾಡಿದ್ದಾರೆ.

ರಾಯಚೂರಿನ ದೇವದುರ್ಗ(Devadurga) ತಾಲೂಕಿನ ನಿಲವಂಜಿ ಗ್ರಾಮದಲ್ಲಿ ಕೊಲೆ ನಡೆದಿದ್ದು, 28 ವರ್ಷದ ಮಾರ್ಕಂಡೇಯ ಕೊಲೆಯಾದ ವ್ಯಕ್ತಿ. ಆರೋಪಿಗಳು ಟ್ರ್ಯಾಕ್ಟರ್ ನಿಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ, ವ್ಯಕ್ತಿ ಕೆಳಗೆ ಬಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸುಮಾರು 6 ಜನರಿಂದ ಕೃತ್ಯ ನಡೆದಿದ್ದು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಗ್ರಾಮದ ಹೊರವಲಯದ ಜಮೀನೊಂದರ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವ ದೇವದುರ್ಗ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]