This is the title of the web page
This is the title of the web page
Crime NewsState News

ದೇವರನ್ನು ಬಿಡದ ಕಳ್ಳರು : ದುರ್ಗಾದೇವಿಗೆ ಹಾಕಿದ್ದ ಚಿನ್ನದ ಮಾಗಲ್ಯ ಸರ ಕಳ್ಳತನ..


K2kannadanews.in

ರಾಯಚೂರು : ದುರ್ಗಾದೇವಿ ದೇವಸ್ಥಾನದಲ್ಲಿ (Durgadevi temple) ದೇವಿಗೆ ಹಾಕಿದ್ದ ಚಿನ್ನದ ಮಾಂಗಲ್ಯ ಸರವನ್ನೇ ಕದ್ದ ಕಳ್ಳರು (Thieves stole golden Mangalya). ಅಲ್ಲದೇ ಹಾಲಾಪುರ, ತುಗ್ಗಲದಿನ್ನಿ, ಬಸವಣ್ಣ ಕ್ಯಾಂಪ್ ಮತ್ತು ಯದ್ದಲದಿನ್ನಿ ಗ್ರಾಮಗಳ ವಿವಿಧ ದೇವಸ್ಥಾನಗಳಲ್ಲಿ ತಡರಾತ್ರಿ ಸರಣಿ ಕಳವು ನಡೆದಿದೆ.

ಹೌದು ರಾಯಚೂರು ಜಿಲ್ಲೆಯ ಮಸ್ಕಿ (Mask I) ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ದೇವಸ್ಥನಗಳಲ್ಲಿ ಸರಣಿ ಕಳ್ಳತನವಾಗಿದೆ (Serial theft). ಹಾಲಾಪುರ(halapura) ಗ್ರಾಮದಲ್ಲಿ ಕರಿಯಪ್ಪ ತಾತನ ದೇವಸ್ಥಾನ, ವೆಂಕಟಾಪುರ (venkatapura) ದುರುಗಮ್ಮ ದೇವಸ್ಥಾನ, ಯದ್ದಲದಿನ್ನಿಯ (yaddaldinni) ಬಸವಣ್ಣ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ಅಚ್ಚರಿಯೆಂದರೇ ತುಗ್ಗಲದಿನ್ನಿಯ (tuggaladinni) ದುರ್ಗಾದೇವಿ ದೇವಸ್ಥಾನದಲ್ಲಿ ಚಿನ್ನದ ಮಾಂಗಲ್ಯ ಸರ ಸೇರಿದಂತೆ ಕಾಣಿಕೆ ಹುಂಡಿ ಕಳವು ಮಾಡಿಕೊಂಡು ಹೋಗಿದ್ದಾರೆ ದುಷ್ಕರ್ಮಿಗಳು.

ಕವಿತಾಳ ಠಾಣೆಯ (kavitala police station) ಅಪರಾಧ ವಿಭಾಗದ ಪಿಎಸ್‌ಐ ಪಂಪಣ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


[ays_poll id=3]