This is the title of the web page
This is the title of the web page
Crime NewsState News

ಗದ್ದೆಯಲ್ಲಿ ಮಲಗಿದ್ದ ಕುರಿಗಾಯಿಗಳ ಮೇಲೆ ಹರಿದ ಲಾರಿ..


K2kannadanews.in

Accident News : ಕುರಿಗಳನ್ನು(Sheep) ಕಟ್ಟಿಹಾಕಿ ಕಬ್ಬಿನ ಗದ್ದೆಯಲ್ಲಿ (sugarcane field) ಮಲಗಿದ್ದ ಕುರಿಗಾಯಿಗಳ ಮೇಲೆ ಲಾರಿ(Lorry) ಹರಿದು ಮೃತಪಟ್ಟ (Died) ಘಟನೆ ಎತ್ತಿನಬೂದಿಹಾಳು ಗ್ರಾಮದಲ್ಲಿ ನಡೆದಿದೆ.

ಬಳ್ಳಾರಿ (Ballary) ತಾಲೂಕಿನ ಎತ್ತಿನಬೂದಿಹಾಳು ಗ್ರಾಮದಲ್ಲಿ ನಡೆದೆ ದುರ್ಘಟನೆಯಲ್ಲಿ ಇಬ್ಬರು ಕುರಿಗಾಹಿಗಳು (lamb) ಮೃತಪಟ್ಟಿದ್ದಾರೆ. ಚಿತ್ರದುರ್ಗ (Chitradurga) ಜಿಲ್ಲೆಯ ಮೊಳಕಾಲ್ಮೂರು (Molkalmuru) ತಾಲೂಕಿನ ಮ್ಯಾಗಳಹಟ್ಟಿ ಗ್ರಾಮದ ಸಿದ್ದಪ್ಪ(51), ಎರಿಸ್ವಾಮಿ(20) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕಬ್ಬಿನ ಗದ್ದೆಯಲ್ಲಿ ರಾತ್ರಿ (Night) ಕುರಿಗಳನ್ನು ಕಟ್ಟಿ ಹಾಕಿ ಇಬ್ಬರು ಮಲಗಿದ್ದರು.

ಬೆಳಗಿನ ಜಾವ (Early morning) 4.30 ರ ಸಮಯಕ್ಕೆ ಕಬ್ಬು ಲೋಡ್‌ ಮಾಡಲು ಲಾರಿ ಗದ್ದೆಗೆ ಬಂದಿದ್ದು, ಲಾರಿ ರಿವರ್ಸ್‌ ತೆಗೆದುಕೊಳ್ಳುವಾಗ ಮಲಗಿದ್ದವರ ಮೇಲೆ ಹರಿದಿದೆ. ಘಟನೆಗೆ ಸಂಬಂದಿಸಿದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ (Ballary Rural police starion) ಪ್ರಕರಣ ದಾಖಲಾಗಿದ್ದು , ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


[ays_poll id=3]