This is the title of the web page
This is the title of the web page
Crime NewsState News

ಬಸ್ ಅಪಘಾತ: ಮುದ್ದೇಬಿಹಾಳ ಮೂಲದ ವ್ಯಕ್ತಿ ಸಾವು


K2kannadanews.in

ರಾಯಚೂರು : ಸಾರಿಗೆ ಸಂಸ್ಥೆಯ ಬಸ್(transport bus) ಮತ್ತು ಬೈಕ್ ನಡುವೆ ಅಪಘಾತ(accident) ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿ ಮೃತಪಟ್ಟ(person dead) ಘಟನೆ ಮಂತ್ರಾಲಯದಲ್ಲಿ ನಡೆದಿದೆ.

ಹೌದು ರಾಯಚೂರು ಜಿಲ್ಲೆ ಆಂಧ್ರಪ್ರದೇಶದ (Andra pradesh) ಮಂತ್ರಾಲಯದಲ್ಲಿ(mantralaya) ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ವಿಜಯಪುರದ ಮುದ್ದೇಬಿಹಾಳ (muddebihal) ನಿವಾಸಿ ವಿಶ್ವನಾಥ ಬಸನಗೌಡ ಬಿರಾದಾರ(35) ಸಾವನ್ನಪ್ಪಿದ್ದಾರೆ. ಮಂತ್ರಾಲಯದಲ್ಲೆ ಸಣ್ಣ ಪುಟ್ಟ ಉದ್ಯಮದಲ್ಲಿ ತೊಡಗಿದ್ದ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಮುದ್ದೇಬಿಹಾಳಕ್ಕೆ ಬರುವಾಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ(KKRTC) ರಾಯಚೂರು ಘಟಕದ ಬಸ್ಸಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಮಂತ್ರಾಲಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.


[ays_poll id=3]