This is the title of the web page
This is the title of the web page
Crime NewsState News

ಮದುವೆ ವಿಚಾರಕ್ಕೆ ಜಗಳ : ಅಣ್ಣ-ತಂಗಿ ದುರಂತ ಸಾವು


K2kannadanews.in

Self Harming ಕಲಬುರಗಿ : ಮದುವೆ ವಿಚಾರಕ್ಕೆ (Marriage issue) ಸಣ್ಣ ಜಗಳವಾಗಿ ಬಾವಿಗೆ ಹಾರಿದ ತಂಗಿಯನ್ನು ಕಾಪಾಡಲು ಅಣ್ಣನೂ ದುರಂತ ಸಾವು ಕಂಡ ಘಟನೆ (Self Harming) ಪಟಪಳ್ಳಿ ಗ್ರಾಮದಲಿ ನಡೆದಿದೆ.

ಹೌದು ಕಲಬುರಗಿ ಜಿಲ್ಲೆಯ (Kalaburagi) ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲಿ ಅಣ್ಣ ಮತ್ತು ತಂಗಿ ಬಾವಿಗೆ ಬಿದ್ದು ಪ್ರಾಣ (Brother and Sister death) ಕಳೆದುಕೊಂಡಿದ್ದಾರೆ. ಸಂದೀಪ್ (23) ಮತ್ತು ನಂದಿನಿ‌ (19) ಎಂಬ ಅಣ್ಣ-ತಂಗಿಯೇ ಪ್ರಾಣ ಕಳೆದುಕೊಂಡವರು. ಮನೆಯಲಿ ನಂದಿನಿಯ ಮದುವೆ ವಿಚಾರದಲ್ಲಿ ಗಲಾಟೆ ನಡೆದಿತ್ತು. ಮನೆಯವರು ಹೇಳಿದ್ದ ಹುಡುಗನನ್ನು ಮದುವೆ ಮಾಡಿಕೊಳ್ಳುವ ವಿಚಾರದಲ್ಲಿ ನಂದಿನಿ ಆಕ್ಷೇಪ ವ್ಯಕ್ತಪಡಿಸಿದ್ದಳು. ಮಾತಿಗೆ ಮಾತು ಬೆಳೆದು ಸಿಟ್ಟುಗೊಂಡ ನಂದಿನಿ ಮನೆಯಿಂದ ಹೊರಗೆ ಓಡಿಹೋಗಿ ಬಾವಿಗೆ ಹಾರಿದ್ದಾಳೆ.

ಇದನ್ನೂ ನೋಡಿದ ಸಹೋದರ ಸಂದೀಪ್‌ ಆಕೆಯನ್ನು ಬೆನ್ನು ಹತ್ತಿ ಹೋಗಿದ್ದ. ಆದರೆ, ಆತನಿಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ಬಾವಿಗೆ ಹಾರಿದ್ದು ನೋಡಿ ಏನು ಮಾಡಬೇಕು ಎಂದು ತೋಚದೆ ಆತನೂ ಬಾವಿಗೆ ಹಾರಿದ್ದಾನೆ. ಕೊನೆಗೆ ಈಜು ಬಾರದೆ ಅಣ್ಣ ತಂಗಿಯಿಬ್ಬರೂ ಬಾವಿಯಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಊರಿನವರು ಆಗಮಿಸಿ ಶವಗಳನ್ನು ಮೇಲೆತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]