K2 ಕ್ರೈಂ ನ್ಯೂಸ್ : ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬ 7 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಮಗು ಗಂಭೀರವಾಗಿ ಗಾಯಗೊಂಡ ಘಟನೆ ಹೊಸಪೇಟೆಯ ನಡೆದಿದೆ.
ಹೊಸಪೇಟೆಯ ಹೊರ ವಲಯದಲ್ಲಿ ಸುರಂಗ ಮಾರ್ಗದ ಬಳಿ ಭೀಕರ ರಸ್ತೆ ಅಪಘಾತ ನಡೆಸಿದ್ದು ಒಂದೇ ಕುಟುಂಬ 7 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಅಲ್ಲದೇ ಮಗು ಗಂಭೀರವಾಗಿ ಗಾಯಗೊಂಡದೆ. ನಗರದ ಉಕ್ಕಡಕೇರಿ ನಿವಾಸಿಗಳಾದ ಕೆಂಚವ್ವ (80), ಗೋಣಿಬಸಪ್ಪ (65), ಬೀಮಲಿಂಗ (50), ಉಮಾ (45), ಭಾಗ್ಯ (32), ಅನಿಲ್ (30), ಯುವರಾಜ (4) ಎಂಬುವರರು ಅಪಘಾತದಲ್ಲಿ ಸಾವನ್ನಪ್ಪಿದವರು.
ಇನ್ನು ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೂಲಹಳ್ಳಿ ಗ್ರಾಮದ ಗೋಣಿ ಬಸವೇಶ್ವರ ದೇವಾಲಯಕ್ಕೆ ದರ್ಶನಕ್ಕಾಗಿ ಕ್ರೂಸರ್ ವಾಹನದಲ್ಲಿ ತೆರಲಿದ್ದು, ಮರಳಿ ಬರುವ ಸಂದರ್ಭದಲ್ಲಿ ಟಿಪ್ಪರ್ ಲಾರಿಯೊಂದು ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಆವಘಡ ಸಂಭವಿಸಿದೆ.
[ays_poll id=3]