K2 ಕ್ರೈಂ ನ್ಯೂಸ್ : ಯುವಕನೊಬ್ಬ ಅಮರನಾಗಲು ಮಾಂತ್ರಿಕರ ಸಲಹೆಯ ಮೇರೆಗೆ, ನೆರೆ ಮನೆಯಲ್ಲಿ ವಾಸಿಸುತ್ತಿದ್ದ 4 ವರ್ಷದ ಮಗುವನ್ನು, ಕತ್ತು ಸೀಳಿ ಕೊಂದು, ಮಗುವಿನ ರಕ್ತವನ್ನು ಕುಡಿದ ಘಟನೆ ಸಿಟಿ ಖನ್ನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಂಜಾಬ್ನ ಖನ್ನಾ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ರಾತ್ರಿ ಪಕ್ಕದ ಮನೆಯಲ್ಲಿ ಮಲಗಿದ್ದ ಮಗುವನ್ನು ಮನೆಗೆ ಹೊತ್ತೋಯ್ದ ಯುವಕ, ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಆತನ ಮನೆಯಲ್ಲಿದ್ದ ರಕ್ತಸಿಕ್ತವಾಗಿದ್ದ ಮಗುವಿನ ಶವವನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ತಡರಾತ್ರಿ ಮಗುವನ್ನು ಅಪಹರಿಸಿದ ವಿಷಯ ಬೆಳಗ್ಗೆ ಮಗುವಿನ ತಂದೆ-ತಾಯಿಗೆ ತಿಳಿದಿದೆ. ಇದಾದ ನಂತರ ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ 4 ಗಂಟೆಯೊಳಗೆ ಮಗುವಿನ ಶವವನ್ನು ಹೊರತೆಗೆದು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅರವಿಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಸಮಾಜದಲ್ಲಿ ಶಕ್ತಿಯುತ ವ್ಯಕ್ತಿಯಾಗಬೇಕೆಂದು ಬಯಸಿದ್ದ. ಅಮರನಾಗಬೇಕೆಂದರೆ ಏನು ಮಾಡಬೇಕೆಂದು ಮಾಂತ್ರಿಕರ ಬಳಿ ಸಲಹೆ ಕೇಳಿದ್ದ. ಮಾಂತ್ರಿಕ ಮಗುವನ್ನು ಬಲಿ ನೀಡಿದರೆ ಈ ಸಾಧನೆ ಸಾಧ್ಯ ಎಂದು ಹೇಳಿದ್ದರು ಎಂದು ಆ ಯುವಕ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.
[ays_poll id=3]