
ಸಿಂಧನೂರು : ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಿರ್ವಾಹಕರ ಪಾಡು ಹೇಳುತ್ತೀರದಾಗಿದೆ. ಒಂದು ಕಡೆ ಫ್ರೀ ಯೋಜನೆಯ ಆಧಾರ್ ಕಾರ್ಡ್ ತರದೆ ಮಹಿಳೆಯರು ಜಗಳವಾಡಿದರೆ, ಇತ್ತ ಪುರುಷರು ಚಿಲ್ಲರೆ ಕಾಸಿಗಾಗಿ ಜಗಳವಾಡುವ ಘಟನೆಗಳು ನೋಡುತ್ತಿದ್ದೇವೆ. ಅಂತದ್ದೇ ಒಂದು ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ.
ಹೌದು ಸಿಂಧನೂರು ನಗರದ ಗಾಂಧಿ ವ್ರತದಲ್ಲಿ ಪ್ರಯಾಣಿಕ ಮತ್ತು ನಿರ್ವಹನ ನಡುವೆ ಜಗಳವಾಗಿದೆ. ಮಸ್ಕಿಯಿಂದ ಗಂಗಾವತಿಗೆ ಹೊರಟಿದ್ದ ಬಸ್ಸಿನಲ್ಲಿ ಇದ್ದ, ಪ್ರಯಾಣಿಕ ನಿರ್ವಾಹಕನಿಗೆ ಚಿಲ್ಲರೆ ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾದ ವಾಗ್ವಾದ ನಡೆದು ಪರಸ್ಪರ ಕಾಲರ್ ಹಿಡಿದು ಕಿತ್ತಾಡಿಕೊಂಡ ಘಟನೆ ನಡೆದಿದೆ. ಕಿತ್ತಾಡುತ್ತಿದ್ದ ಇಬ್ಬರನ್ನು ಅಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿ ಎಎಸ್ಐ ಮಧ್ಯಪ್ರವೇಶಸಿ ಇಬ್ಬರ ಜಗಳ ಬಗೆಹರಿಸಿ ಕಳಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]