K2kannadanews.in
Accused arrested ರಾಯಚೂರು : ಟಿಪ್ಪು ಸುಲ್ತಾನ್ (Tippu sultan) ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ ಪ್ರಕರಣಕ್ಕೆ (Case) ಸಂಬಂದಿಸಿದಂತೆ ಆರೋಪಿಯನ್ನ (Accused) ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಬಿ ಹೇಳಿದರು.
ರಾಯಚೂರು (Raichur) ಜಿಲ್ಲೆಯ ಸಿರವಾರ ಪಟ್ಟಣದಲ್ಲಿ , ಜನವರಿ (January) 30ರಂದು ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ (Muslim) ಸಮುದಾಯದ ವತಿಯಿಂದ ಪ್ರತಿಭಟನೆಯನ್ನು (protest) ಮಾಡಲಾಗಿತ್ತು. ಪ್ರತಿಭಟನಾಕಾರರಿಗೆ ಸಿರವಾರ ಪೊಲೀಸರು 24 ಗಂಟೆಗಳ ಒಳಗಾಗಿ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು (police) ಎರಡು ತಂಡಗಳಾಗಿ (Team) ರಚನೆ ಮಾಡಿ, ಹುಡುಕಾಟ ನಡೆಸಿ ಆರೋಪಿಯನ್ನು ಬಂದಿಸಿದ್ದಾರೆ.
ಸಿರವಾರ ಮೂಲದ ಆಕಾಶ್(Akash) (23) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಯು ಕೃತ್ಯ ಎಸಗಿರುವುದು ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು. ಆರೋಪಿಗೆ ಯಾವುದೇ ಸಂಘಟನೆಗಳ ಇತಿಹಾಸ ಇಲ್ಲ ಎಂದು ಹೇಳಿದರು.
[ays_poll id=3]