K2kannadanews.in
ಸಿಂಧನೂರು : ನಗರದ ಅಯ್ಯಪ್ಪ ಸ್ವಾಮಿ (Ayyappa Swamy) ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಅಗ್ನಿ ಪ್ರಜ್ವಲಿಸಿದೆ (fire blazing). ಇದು ಅಯ್ಯಪ್ಪನ ಪವಾಡ (miracle) ಎಂದು ಮಾಲಾಧಾರಿಗಳು ಹೇಳುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು (sindhanur) ನಗರದಲ್ಲಿನ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಲ್ಲಿ (Temple), ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಹೋಮ (homa) ಮಾಡಲಾಗುತ್ತಿತ್ತು. ಈ ವೇಳೆ ಎಲ್ಲಾ ಮಲಾಧಾರಿಗಳ ಮುಂದೆ ಪವಾಡ ನಡೆದಿದೆ ಎನ್ನಲಾದ ವಿಡಿಯೋ ವೈರಲ್(Video viral) ಆಗಿದೆ.
ಪೂಜಾ ಕಾರ್ಯಕ್ರಮದ ವೇಳೆ ಗುರುಸ್ವಾಮಿ ಶ್ರೀಹರಿರಾಜು ಸ್ವಾಮಿ ನೇತೃತ್ವದಲ್ಲಿ ನೂರಾರು ಅಯ್ಯಪ್ಪ ಮಾಲಾಧಾರಿಗಳು ಪೂಜೆ ನಡೆಸುತ್ತಿದ್ದರು. ಆಗ ಹೋಮ ಮಾಡುತ್ತಿದ್ದ ವೇಳೆ ಏಕಾಏಕಿಯಾಗಿ ಅಗ್ನಿ ಪ್ರಜ್ವಲಿಸಿದೆ. ಇದು ಅಯ್ಯಪ್ಪ ಸ್ವಾಮಿಯ ಪವಾಡ ಎಂದು ಮಾಲಾಧಾರಿಗಳು ಹೇಳುತ್ತಿದ್ದಾರೆ.
[ays_poll id=3]