ರಾಯಚೂರು : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತ ಬೆಳೆದ ದೇವದುರ್ಗದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ ರೈತರಿಗೆ ಒಳ್ಳೆದು ಮಾಡಲು ಹೋದ ಸಚಿವ ಎನ್ ಎಸ್ ಬೋಸರಾಜ್ ವಿರುದ್ಧ ಆಮಧನ ವ್ಯಕ್ಯಪಡಿಸಿದ ರೈತ.
ರಾಯಚೂರು ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನಲೆ ರೈತರ ಅನುಕೂಲಕ್ಕಾಗಿ ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೊಸರಾಜ್ ಅವರು ತಮ್ಮ ಫೌಂಡೇಷನ್ ವತಿಯಿಂದ ಮೋಡ ಬಿತ್ತನೆ ಮೂಲಕ ಮಳೆ ತರಿಸುವ ಪ್ರಯತ್ನ ಮಾಡಿದ್ದರು. ಆದರೆ ಅದೇ ಸಮಯಕ್ಕೆ ಪ್ರಾಕೃತಿಕವಾಗಿ ಮಳೆ ಆಗಮನವಾಗಿದೆ. ಆದರೆ ಮೋಡ ಬಿತ್ತನೆಯಿಂದಲೇ ಮಳೆಯಾಗಿದೆ ಎಂದು ಜಿಲ್ಲೆಯಾದ್ಯಂತ ಮಾತನಾಡಿಕೊಳ್ಳಲಾಗುತ್ತಿದೆ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನಾಗೋಲಿ ಗ್ರಾಮದ ರೈತನೋರ್ವ, ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾನೆ. ಮೋಡ ಬಿತ್ತನೆಯಿಂದಲೇ ಮಳೆ ಬಂದಿದೆ, ಕಟಾವಿಗೆ ಬಂದ ಭತ್ತ ನೆಲಕಚ್ಚಿದೆ, ಮಳೆಯಿಂದ ನನ್ನ ಭತ್ತ ಸಂಪೂರ್ಣ ನಾಶವಾಗಿದೆ. ಲಕ್ಷಾಂತರ ರೂಪಾಯಿ ಬಂಡಬಾಳ ಹಾಕಿದ್ದು ನಷ್ಟ ಹೊಂದಿದ್ದೇನೆ. ನಷ್ಟ ಪರಿಹಾರ ಯಾರು ಕೊಡುತ್ತಾರೆ ಎಂದು ಸಚಿವರಿಗೆ ಪ್ರಶ್ನೆ.ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗಿದ್ದು, ವಿಷ ಕುಡಿಯುವ ಪರಿಸ್ಥಿತಿ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದಾನೆ ರೈತ.
[ays_poll id=3]