ಶ್ರಾವಣ ಮಾಸದಲ್ಲಿ ಮಾಂಸಾಹಾರ ತ್ಯಜಿಸುವುದಕ್ಕೆ ವೈಜ್ಞಾನಿಕ ಕಾರಣವಿದೆ..?

K 2 Kannada News
ಶ್ರಾವಣ ಮಾಸದಲ್ಲಿ ಮಾಂಸಾಹಾರ ತ್ಯಜಿಸುವುದಕ್ಕೆ ವೈಜ್ಞಾನಿಕ ಕಾರಣವಿದೆ..?
Oplus_131072
WhatsApp Group Join Now
Telegram Group Join Now

K2kannadanews.in

scientific reason : ಆಷಾಢ ಕಳೆದು ಶ್ರಾವಣ ಮಾಸ ಬಂದಿದೆ. ಈ ಮಾಸದಲ್ಲಿ ನಾನ್ ವೆಜ್ ತಿನ್ನಬಾರದು ಎನ್ನುತ್ತಾರೆ. ಯಾಕೆ ತಿನ್ನಬಾರದು ಎಂಬ ಪ್ರಶ್ನೆ ಕಾಡುತ್ತದೆ. ಅನೇಕರು ದೇವರ ಹೆಸರಿನಲ್ಲಿ ಮಾಂಸಾಹಾರ ತ್ಯಜಿಸಿ ದೇವರ ಉಪಾಸನೆಯಲ್ಲಿ ತೊಡಗುತ್ತಾರೆ. ಇದು ಧಾರ್ಮಿಕ ಶ್ರದ್ಧೆಯಾದರೆ ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ ಎನ್ನುವವರಿದ್ದಾರೆ.

ಈ ತಿಂಗಳಲ್ಲಿ ಮಳೆಯಾಗುತ್ತದೆ. ಪರಿಸರದಲ್ಲಿ ಶಿಲೀಂಧ್ರಗಳು ಮತ್ತು ವೈರಸ್‌ಗಳ ಸೋಂಕು ಹೆಚ್ಚಾಗುತ್ತದೆ. ಆಹಾರವು ಬೇಗನೆ ಹಾಳಾಗುತ್ತದೆ. ಸೂರ್ಯನ ಬೆಳಕಿನ ಕೊರತೆಯಿಂದಾಗಿ ಮಳೆಗಾಲದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ, ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮವಾಗಿದೆ. ಮಳೆಗಾಲದಲ್ಲಿ ನೀರು ಕಲುಷಿತವಾಗುವುದರಿಂದ, ಈ ಸಮಯದಲ್ಲಿ ಮೀನು ಇತ್ಯಾದಿ ಮಾಂಸಾಹಾರ ಯೋಗ್ಯ ಜೀವಿಗಳು ರೋಗ ಹರಡುವ ಲಕ್ಷಣಗಳನ್ನು ಹೊಂದಿರುತ್ತದೆ. ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರ ಸೇವನೆ ಅಷ್ಟು ಒಳ್ಳೆಯದಲ್ಲ ಎನ್ನುವುದು ವೈಜ್ಞಾನಿಕವಾಗಿ ನೀಡಲಾಗುವ ಕಾರಣವಾಗಿದೆ.

ಇದರ ಜೊತೆಗೆ ಧಾರ್ಮಿಕವಾಗಿಯೂ ಈ ಮಾಸದಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ. ಯಾಕೆಂದರೆ ಶ್ರಾವಣ ಮಾಸ ಹಲವು ದೇವರುಗಳ ಹಬ್ಬಗಳ ಮಾಸ. ದೇವರ ಆರಾಧನೆಯ ನಡುವೆ ಮಾಂಸಾಹಾರ ಮಾಡದೇ ಸಾತ್ವಿಕ ಆಹಾರ ಮಾಡುವುದು ಒಳ್ಳೆಯದು ಎಂಬ ಕಾರಣಕ್ಕೆ ಶ್ರಾವಣ ಮಾಸದಲ್ಲಿ ಮಾಂಸಾಹಾರ ತ್ಯಜಿಸುತ್ತಾರೆ.

WhatsApp Group Join Now
Telegram Group Join Now
Share This Article