ನೋಡಿ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಟ್ರ್ಯಾಕ್ಟರ್ ಚಾಲಕನ ಹುಚ್ಚು ಸಾಹಸ..

K 2 Kannada News
ನೋಡಿ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಟ್ರ್ಯಾಕ್ಟರ್ ಚಾಲಕನ ಹುಚ್ಚು ಸಾಹಸ..
WhatsApp Group Join Now
Telegram Group Join Now

K2kannadanews.in

Local news ಲಿಂಗಸುಗೂರು : ಟ್ರ್ಯಾಕ್ಟರ್​ ಚಾಲಕನ ಹುಚ್ಚು ಸಾಹಸಕ್ಕೆ ಅಮಾಯಕರ ಜೀವ ಪಣಕ್ಕಿಟ್ಟಿದ್ದ, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸದೇ ಎಲ್ಲರೂ ಪಾರದ ಘಟನೆ ಉದ್ಬಾಳ ಗ್ರಾಮದಲ್ಲಿ ನಡೆದಿದೆ.

ಭಾರಿ ಮಳೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಉದ್ಬಾಳ ಗ್ರಾಮದಲ್ಲಿನ ಹಳ್ಳ ತುಂಬಿ ಹರಿಯುತ್ತಿತ್ತು. ಜಾತ್ರೆಗೆಂದು ಹೋಗುತ್ತಿದ್ದ ಟ್ರ್ಯಾಕ್ಟರ್, ವಾಪಸ್ ಮನೆಗೆ ಹೋಗದೆ, ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಚಾಲಕ ಟ್ಯ್ರಾಕ್ಟರ್​ ಚಲಾಯಿಸಿದ್ದಾನೆ. ಆಗ ಟ್ರ್ಯಾಕ್ಟರ್​ ಹಳ್ಳದ ಮಧ್ಯಕ್ಕೆ ಹೋದಾಗ ಮುಂದೆ ಹೋಗಲು ಆಗದೆ ಸಿಲುಕಿ ಕೊಂಡಿದೆ. ಟ್ರ್ಯಾಕ್ಟರ್​ನಲ್ಲಿ ಜನರಿದ್ದು ಬಳಗಾನೂರು ಗ್ರಾಮದ ಜನರು, ಚಿಕ್ಕ ಉದ್ಬಾಳ ಗ್ರಾಮದ ಜಾತ್ರೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ. ಒಂದು ಘಟನೆ ನಂತರ ಪೊಲೀಸ್ ಇಲಾಖೆ ಮಳೆಗಾಲದಲ್ಲಿ ಇಂತಹದು ಸಾಹಸಕ್ಕೆ ಯಾರು ಮುಂದಾಗದಂತೆ ಮನವಿ ಮಾಡಿದೆ.

WhatsApp Group Join Now
Telegram Group Join Now
Share This Article