K2kannadanews.in
Local News ಸಿಂಧನೂರು : ಸಿಂಧನೂರು ನಗರದಲ್ಲಿ ಇಂದು ಮತ್ತೆ ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ಜನರು, ರೈತರಿಗಾಗಿ ಕೆಲಸ ಮಾಡಬೇಕಾದ ರಾಜಕಾರಣಿಗಳು ಅಧಿಕಾರಿಗಳಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ರೈತರಿಂದ ಜೋಳ ಖರೀದಿ ಪ್ರಕ್ರಿಯೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದು, ಜನವರಿಯಿಂದ ಇದುವರೆಗೂ ಕರೆದಿ ಮಾಡಿಲ್ಲ, ಬಳಕೆ ಹೌದು ಜೋಳ ಕರಿ ಬಣ್ಣಕ್ಕೆ ತಿರುಗಿದ್ದು ಹುಳುಗಳು ಆಗಿವೆ. ಇದೀಗ ನೊಂದಣಿ ಮಾಡಿಕೊಂಡ ರೈತನ ಜೋಳವೂ ಕೂಡ ವಾಪಸ್ ಕಳುಹಿಸುತ್ತಿದೆ. ಖರೀದಿ ಮಾಡುವಂತೆ ಪ್ರತಿಭಟನೆ ಮಾಡಿದರು ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಯಾವುದಾದರೂ ಅಧಿಕಾರಿಗಳು ಅಮಾನತ್ತು ಆದರೆ, ರಾತ್ರೋರಾತ್ರಿ ಬೆಳಗಾವಿಯಿಂದ ಬೆಂಗಳೂರಿಗೆ ಹೋಗಿ ಅಮಾನತ್ತು ಆದೇಶ ಕ್ಯಾನ್ಸಲ್ ಮಾಡಿಕೊಂಡು ಬರುತ್ತಾರೆ. ಆದರೆ ರೈತರು ಇಷ್ಟು ಹೋರಾಟ ಮಾಡುತ್ತಿದ್ದರು ಅವರ ಸಮಸ್ಯೆ ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.