ಸಿಂಧನೂರು : ಚಲಿಸುತ್ತಿದ್ದ ಓಮಿನಿ ವ್ಯಾನಿಗೆ ಬೆಂಕಿಯಿಂದ ಹೊತ್ತಿ ಉರಿದು, ಕೂದಲೆಳೆ ಅಂತರದಲ್ಲಿ ದಂಪತಿಗಳು ಪಾರದ ಘಟನೆ ಸಿಂಧನೂರು ನಗರದ ಹೊರಹೊಲೆಯಲ್ಲಿ ನಡೆದಿದೆ.
ಸಿರುಗುಪ್ಪ ದಿಂದ ಸಿಂಧನೂರು ಕಡೆಗೆ ಬರುತ್ತಿದ್ದ ವೇಳೆ ಚಲಿಸುತ್ತಿದ್ದ ವ್ಯಾನಿನಲ್ಲಿ ಹೊಗೆ ಬರಲಾರಂಭಿಸಿದೆ. ಆತಂಕಗೊಂಡ ದಂಪತಿಗಳೊಬ್ಬರು ಕೂಡಲೇ, ರಸ್ತೆ ಬದಿಗೆ ನಿಲ್ಲಿಸಿ ವಾಹನದಿಂದ ಇಳಿದಿದ್ದಾರೆ. ದಂಪತಿಗಳಿಬ್ಬರು ಇಳಿಯುತ್ತಿದ್ದಂತೆ ಓಮಿನಿ ವ್ಯಾನ್ ದಗದಗನೆ ಹೊತ್ತಿ ಉರಿದು ಸುಟ್ಟು ಕರಕಲಾಗಿದೆ.
ಓಮಿನಿ ವ್ಯಾನ್ ಮನೋಜ್ ರಾಯ್ ಎಬುವವರಿಗೆ ಸೇರಿದ್ದಾಗಿದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ, ಅಗ್ನಿ ಶಾಮಕ ದಳದಕ್ಕೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಸಿಬ್ಬಂದಿಗಳ ಬೆಂಕಿ ನಂದಿಸಿದ್ದಾರೆ. ಗಂಡ ಹೆಂಡತಿ ಪ್ರಾಣಾಪಾಯದಿಂದ ಪಾರಾಗಿದ್ದು, ಸಿಂಧನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
[ays_poll id=3]