ಲಿಂಗಸುಗೂರು : ಹಳೆ ಸೇಡು ಯುವಕನ ಕೊಲೆಗೆ ಯತ್ನ…

K 2 Kannada News
ಲಿಂಗಸುಗೂರು : ಹಳೆ ಸೇಡು ಯುವಕನ ಕೊಲೆಗೆ ಯತ್ನ…
Oplus_0
WhatsApp Group Join Now
Telegram Group Join Now

K2kannadanews.in

Attempt murder ಲಿಂಗಸುಗೂರು : ಯುಗಾದಿ ಹಬ್ಬದಂದು (Yugadi festival) ನಡೆದಿರೋ ಗಲಾಟೆಯನ್ನೇ ಮನಸ್ಸಿನಲ್ಲಿಟ್ಟುಕೊಂಡು ಸೇಡು (Revenge) ತೀರಿಸಿಕೊಳ್ಳಲು ಯುವಕನಿಗೆ (Youth) ಚಾಕುವಿನಿಂದ (Knife) ಬೆನ್ನು ಮತ್ತು ಕುತ್ತಿಗೆಗೆ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ನಾಗರಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ರಾಯಚೂರು (raichur) ಜಿಲ್ಲೆಯ ಲಿಂಗಸಗೂರು (Lingasuguru) ತಾಲೂಕಿನ ನಾಗರಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ (Attempt murder) ವ್ಯಕ್ತಿ ಅಮರೇಶ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಇನ್ನೂ ಸಂತೋಷ ಸೇರಿ ಸುಮಾರು 9 ಜನರಿಂದ ಅಮರೇಶ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಳೆ ವೈಶ್ಯಮ್ಯದಿಂದಾಗಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಯುಗಾದಿ ಹಬ್ಬದಂದು ಅಮರೇಶ (Amresh) ಮತ್ತು ಸಂತೋಷ (Santhosh) ಮಧ್ಯೆ ಗಲಾಟೆ (Fight) ನಡೆದಿತ್ತು, ಇದೇ ಜಗಳ ವಿಚಾರಕ್ಕೆ ಮುದುಗಲ್ ಠಾಣೆ (Mudugal police station) ಮೆಟ್ಟಿಲು ಏರಿದ್ದರು. ಆಗಿನಿಂದಲೇ ಸಂತೋಷಗೆ ಅಮರೇಶ ಮೇಲೆ ಹಳೆಯ ವೈಶ್ಯಮ್ಯ ಬೆಳೆದಿತ್ತು ಎನ್ನಲಾಗಿದೆ. ಇದೇ ವೈಶಮ್ಯದಿಂದ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಮುದುಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article