ರಾಯಚೂರು : ಬಯಲು ಶೌಚಕ್ಕೆ ಹೋದ ಮಹಿಳೆ ಮಣ್ಣು ಹಾಕಿದ ಜೆಸಿಬಿ ಚಾಲಕ : ಮಹಿಳೆ ಸಾವು..

K 2 Kannada News
ರಾಯಚೂರು : ಬಯಲು ಶೌಚಕ್ಕೆ ಹೋದ ಮಹಿಳೆ ಮಣ್ಣು ಹಾಕಿದ ಜೆಸಿಬಿ ಚಾಲಕ : ಮಹಿಳೆ ಸಾವು..
Oplus_131072
WhatsApp Group Join Now
Telegram Group Join Now

K2kannadanews.in

JCB Soil ರಾಯಚೂರು : ನಿವೇಶನದಲ್ಲಿ (Plot) ಬಯಲು ಶೌಚಾಲಯಕ್ಕೆ (open toilet)
ಹೋದ ವೇಳೆ ಜೆಸಿಬಿ (JCB) ಮಣ್ಣು ಹಾಕಿದ ಕಾರಣ ಮಹಿಳೆ ಮೃತಪಟ್ಟ (Women death) ಘಟನೆ ನಡೆದಿದೆ.

ರಾಯಚೂರು (Raichur) ನಗರದ ಆಶಾಪುರ (Ashapura) ರಸ್ತೆಯಲ್ಲಿನ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ನಿವೇಶನ ಸ್ವಚ್ಚಗೊಳಿಸುತ್ತಿದ್ದ (cleaning) ಜೆಸಿಬಿ ಚಾಲಕನಿಂದ (Driver) ಅಚಾತುರ್ಯ ನಡೆದಿದೆ. ಖಾಲಿ ನಿವೇಶನದಲ್ಲಿ ಜಾಲಿ ಗಿಡ ಕಸ ಬೆಳೆದಿತ್ತು. ಬಡಾವಣೆ ಕೆಲ ಬಡ ಮಹಿಳೆಯರು ಇಲ್ಲಿ ಬಯಲುಶೌಚಕ್ಕೆ ಹೋಗುತ್ತಿದ್ದರು. ನಿವೇಶನದಲ್ಲಿ ಖಾಲಿ ನಿವೇಶನದಲ್ಲಿ ಜಾಲಿ ಗಿಡ ಕಸ ಬೆಳೆದಿತ್ತು. ಜೆಸಿಬಿಯಿಂದ ಸ್ವಚ್ಚ ಮಾಡುತ್ತಿದ್ದ ವೇಳೆ ಮಹಿಳೆ ಮೇಲೆ ಮಣ್ಣಿನ ರಾಶಿ ಬಿದ್ದರಿಂದ ಮಹಿಳೆ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.

ತಾಯಮ್ಮ(32) ಘಟನೆಯಲ್ಲಿ ಮೃತಪಟ್ಟ ಮಹಿಳೆ ದುರ್ದೈವಿ. ಮಹಿಳೆ ಸಾವಿನಿಂದ ಮೂರು ಮಕ್ಕಳು ಅನಾಥವಾಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ವೆಸ್ಟ್ ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ಮಾಡಿ ಜೆಸಿಬಿ ಮತ್ತು ಚಾಲಕನನ್ನು ವಶಕ್ಕೆ ಪಡೆದ್ದಾರೆ. ಮರಣೋತ್ತರ ಪರೀಕ್ಷಗಾಗಿ ರಿಮ್ಸ್ ಆಸ್ಪತ್ರೆಗೆ ಶವ ರವಾನಿಸಿದ್ದಾರೆ. ವೆಸ್ಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article