ಲಿಂಗಸುಗೂರು : ಚಾಲಕನ ಸಮಯಪ್ರಜ್ಞೆ ತಪ್ಪಿದ ದುರಂತ, ಸಾರಿಗೆ ಇಲಾಖೆ ವಿರುದ್ಧ ಅಸಮಧಾನ..

K 2 Kannada News
ಲಿಂಗಸುಗೂರು : ಚಾಲಕನ ಸಮಯಪ್ರಜ್ಞೆ ತಪ್ಪಿದ ದುರಂತ, ಸಾರಿಗೆ ಇಲಾಖೆ ವಿರುದ್ಧ ಅಸಮಧಾನ..
WhatsApp Group Join Now
Telegram Group Join Now

K2kannadanews.in

sense of timing tragedy ಲಿಂಗಸುಗೂರು : KKRTC ಬಸ್‍ ಸ್ಟೇರಿಂಗ್‍ ಬೋಲ್ಟ್ ಕಟ್ಟಾಗಿ ನಿಯಂತ್ರಣ ತಪ್ಪಿದ್ದ ವೇಳೆ, ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದ ಘಟನೆ ಈಚನಾಳ ಗ್ರಾಮದ ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದ ಬಳಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೊರಲಬೆಂಚಿ ಗ್ರಾಮಕ್ಕೆ ಪ್ರಯಾಣಿಕರು, ಶಾಲಾ-ಕಾಲೇಜು ಮಕ್ಕಳನ್ನು ತುಂಬಿಕೊಂಡು ಈಚನಾಳ ಮಾರ್ಗವಾಗಿ ತೆರಳುತ್ತಿತ್ತು, ಹದಗೆಟ್ಟ ರಸ್ತಡಯಿಂದ ಸ್ಟೇರಿಂಗ್‍ ಬೋಲ್ಟ್ ಕಟ್ಟಾಗಿ ನಿಯಂತ್ರಣ ತಪ್ಪಿತ್ತು. ಹದಗೆಟ್ಟತಗ್ಗು ಗುಂಡಿಗೆ ಬೀಳುವ ಸಾಧ್ಯತೆ ಇತ್ತು. ಈ ವೇಳೆ ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೆ.ಎ 36 ಎಫ್‍ 1222 ಬಸ್‍ ಚಾಲನೆ ತಪ್ಪಿ ಸುರಕ್ಷಿತವಾಗಿ ನಿಂತಿದೆ. ಬಸ್‍ ಸಣ್ಣ ಗುಂಡಿಗೆ ಇಳಿಯುತ್ತಿದ್ದಂತೆ ಪ್ರಯಾಣಿಕರು ಇಳಿದು ಮೂರು ಕಿಲೋ ಮೀಟರ್‍ ಅಂತರದ ತೋರಲಬೆಂಚಿ ಗ್ರಾಮ ತಲುಪಿಸದರು. ಸುಸಜ್ಜಿತ ಬಸ್‍ ಬಿಡದಿರುವುದಕ್ಕೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿತ್ತು.

WhatsApp Group Join Now
Telegram Group Join Now
Share This Article